'ಇಂಕ್ ಡಬ್ಬಿ' ಆನ್ಲೈನ್ ಮಾಧ್ಯಮದಿಂದ ರಾಜ್ಯ ಮಟ್ಟದ ಲೇಖನ ಸ್ಪರ್ಧೆ
ಬೆಂಗಳೂರು : ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ 'ಇಂಕ್ ಡಬ್ಬಿ' ಆನ್ಲೈನ್ ಮಾಧ್ಯಮ ವತಿಯಿಂದ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯ ಬಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.
ಇಂಕ್ ಡಬ್ಬಿ ವಿದ್ಯಾರ್ಥಿ-ಯುವಜನರೆ ನಡೆಸುವ ಆನ್ಲೈನ್ ಮಾಧ್ಯಮವಾಗಿದ್ದು ಪ್ರಮುಖವಾಗಿ ವಿದ್ಯಾರ್ಥಿ-ಯುವಜನರ ಅಭಿವ್ಯಕ್ತಿ, ಆಲೋಚನೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಬರವಣಿಗೆಯ ಕೌಶಲ್ಯವನ್ನು ಉತ್ತೇಜಿಸುವ ಮತ್ತು ವಿದ್ಯಾರ್ಥಿ-ಯುವಜನರಲ್ಲಿ ಚಿಂತಿಸುವ ಮತ್ತು ಆಲೋಚಿಸುವ ಮನೋಭಾವವನ್ನು ಬೆಳೆಸುವುದಕ್ಕಾಗಿ ಹಾಗೂ ಸಂವೇದನಾಶೀಲ ವಿದ್ಯಾರ್ಥಿ-ಯುವಜನರನ್ನು ಒಳಗೊಂಡ ಸಮಾಜದ ನಿರ್ಮಾಣಕ್ಕಾಗಿ ಬರವಣಿಗೆಯ ಕೌಶಲ್ಯವನ್ನು ಉತ್ತೇಜಿಸುತ್ತಿದ್ದೇವೆ. ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಕ್ಯಾಂಪಸ್ ನ ಧ್ವನಿಯನ್ನು ಮತ್ತು ಅಲ್ಲಿ ಚರ್ಚಿಸಲ್ಪಡುವ ವಿಚಾರಗಳನ್ನು ಈ ನಾಡು ಕೇಳುವಂತಾಗಲು ಇಂಕ್ ಡಬ್ಬಿ ಆನ್ಲೈನ್ ಮಾಧ್ಯಮವು ಶ್ರಮಿಸುತ್ತಿದೆ. ಸಮಾಜದ ಹಾಗು-ಹೋಗುಗಳ ಬಗ್ಗೆ ಅರಿವಿರುವ ಸಂವೇದನಾಶೀಲ ವಿದ್ಯಾರ್ಥಿ-ಯುವಜನರನ್ನು ಒಳಗೊಂಡ ಸಮಾಜದ ನಿರ್ಮಾಣಕ್ಕಾಗಿ ಬರವಣಿಗೆಯ ಕೌಶಲ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂಕ್ ಡಬ್ಬಿ ಕಾರ್ಯನಿರ್ವಹಿಸುತ್ತಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತವಾಗಿ ರಾಜ್ಯದ ವಿದ್ಯಾರ್ಥಿ-ಯುವಜನರಿಗೆ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ವಿಷಯ : ಭಾರತದ ಸಂವಿಧಾನ, ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದಲ್ಲಿ ಪ್ರಸ್ತುತ ವಿದ್ಯಾರ್ಥಿ-ಯುವಜನರ ಕರ್ತವ್ಯ.
ಪ್ರಥಮ ಬಹುಮಾನ : 10,000 ರೂ. ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನ : 5,000 ರೂ. ಮತ್ತು ಪ್ರಮಾಣ ಪತ್ರ, ತೃತೀಯ ಬಹುಮಾನ : 3,000 ರೂ. ಮತ್ತು ಪ್ರಮಾಣ ಪತ್ರ. ಆಯ್ದ ಲೇಖನಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು. ಲೇಖನ ಸ್ವೀಕರಿಸುವ ಕೊನೆಯ ದಿನಾಂಕ : ನವೆಂಬರ್ 25.
ಯಾರು ಬರೆಯಬಹುದು : ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಮಾತ್ರ. ಲೇಖನವನ್ನು ಈ-ಮೇಲ್ ಮೂಲಕ ಕಳುಹಿಸುವವರು ಈ ವಿಳಾಸಕ್ಕೆ ಕಳುಹಿಸಿ : inkdabbimedia@gmail.com
ಲೇಖನವನ್ನು ಅಂಚೆ ಮೂಲಕ ಕಳುಹಿಸುವವರು ಈ ವಿಳಾಸಕ್ಕೆ ಕಳುಹಿಸಿ : ಜ್ಞಾನ ಕೇಂದ್ರ #7 ಎಸ್.ಆರ್.ಕೆ ಉದ್ಯಾನ, ಜಯನಗರ ಪೂರ್ವ, ಬೆಂಗಳೂರು - 560041, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8183871243 /8792908185