ರಾಘವೇಂದ್ರ ಭಟ್

Update: 2021-11-26 15:41 GMT

ಉಡುಪಿ, ನ.26: ರಂಗಭೂಮಿ ಉಡುಪಿಯ ಹಿರಿಯ ಸಂಗೀತ ನಿರ್ದೇಶಕ ರಾದ ಕೆ.ರಾಘವೇಂದ್ರ ಭಟ್ (80) ಅವರು ಇಂದು ಬೆಳಗ್ಗೆ ಕಡಿಯಾಳಿ ಯಲ್ಲಿರುವ ತಮ್ಮ ಸ್ವಗೃಹದಲ್ಲಿ ವಯೋಸಹಜ ಅಸೌಖ್ಯದಿಂದ ನಿಧನರಾದರು. ಅವರು ಪತ್ನಿಯನ್ನು ಅಗಲಿದ್ದಾರೆ.

ರಂಗಭೂಮಿ ಉಡುಪಿ ತಂಡದ ಬಹಳಷ್ಟು ನಾಟಕಗಳಿಗೆ ಇವರು ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ರಂಗಭೂಮಿ ತಂಡ ಭಾಗವಹಿಸಿದ್ದ ಸಾಕಷ್ಟು ನಾಟಕ ಸ್ಪರ್ಧೆಗಳಲ್ಲಿ ಉತ್ತಮ ಸಂಗೀತಕ್ಕಿರುವ ಪ್ರಶಸ್ತಿಗಳನ್ನು ರಾಘವೇಂದ್ರ ಭಟ್ ಜಯಿಸಿದ್ದರು. ಒಂದು ಕಾಲದಲ್ಲಿ ಉಡುಪಿ ಪರಿಸರದಲ್ಲಿ ಖ್ಯಾತಿ ಗಳಿಸಿದ್ದ ರಂಗಭೂಮಿ ಆರ್ಕೆಸ್ಟ್ರಾ ತಂಡವನ್ನು ಸಹ ಇವರು ಮುನ್ನಡೆಸಿದ್ದರು.

ಎಲ್‌ಐಸಿಯ ಉದ್ಯೋಗಿಯಾಗಿದ್ದು, ನಿವೃತ್ತ ಜೀವನ ನಡೆಸುತಿದ್ದ ಭಟ್, ಉಡುಪಿಯ ಸಾಕಷ್ಟು ಮಂದಿಗೆ ಸಂಗೀತ ಕ್ಷೇತ್ರದಲ್ಲಿ ತರಬೇತಿಯನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ