ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆ:ಲೋಕಸಭೆ ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ

Update: 2021-11-29 06:34 GMT
Photo: ANI

ಹೊಸದಿಲ್ಲಿ: ಕೃಷಿ  ಕಾನೂನುಗಳ ರದ್ದತಿ ಮಸೂದೆಯ ಮೇಲೆ ಚರ್ಚೆಗೆ ಒತ್ತಾಯಿಸಿ  ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು ಎಂದು India Today ವರದಿ ಮಾಡಿದೆ.

ಮೂಲಗಳ ಪ್ರಕಾರ, ಸಂಸತ್ತಿನಲ್ಲಿ  ಕೃಷಿ ಕಾನೂನುಗಳ ರದ್ದತಿ ಮಸೂದೆಯ ಬಗ್ಗೆ ಯಾವುದೇ ಚರ್ಚೆಗೆ ಸರ್ಕಾರ ಸಿದ್ಧವಿಲ್ಲ.

"ಪ್ರಧಾನಿ ಕ್ಷಮೆ ಕೇಳಿದ್ದಾರೆ. ನಿಮಗೆ ಇನ್ನೇನು ಬೇಕು?" ಎಂದು ಸರಕಾರದ ಪ್ರತಿನಿಧಿಗಳು ಪ್ರತಿಪಕ್ಷ ನಾಯಕರನ್ನು ಕೇಳಿದ್ದಾರೆ.

ರೈತರ ಪ್ರತಿಭಟನೆಯ ವೇಳೆ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ಹಾಗೂ ಹಾಗೂ  ಎಂಎಸ್ ಪಿ ಸಮಸ್ಯೆಗಳನ್ನುಬಗೆಹರಿಸುವಂತೆ  ಪ್ರತಿಪಕ್ಷಗಳು ಒತ್ತಾಯಿಸಿವೆ.

ಕಾಂಗ್ರೆಸ್ ಹಾಗೂ  ಟಿಎಂಸಿ ಸಂಸದರು ರೈತರ ಪರ ಘೋಷಣೆಗಳನ್ನು ಕೂಗುತ್ತಿದ್ದಾಗ ವಿವಾದಿತ ಕೃಷಿ ಕಾನೂನಿನ ವಿರುದ್ಧದ ಆಂದೋಲನದ ವೇಳೆ ಪ್ರಾಣ ಕಳೆದುಕೊಂಡ ರೈತರ ಸಾವಿಗೆ ಸದನದಲ್ಲಿ ಸಂತಾಪ ಸೂಚಿಸುವ ನಿರ್ಣಯವನ್ನು ಸದನ ಅಂಗೀಕರಿಸಬೇಕೆಂದು ಡಿಎಂಕೆಯ ಟಿ.ಆರ್. ಬಾಲು ಒತ್ತಾಯಿಸಿದರು.

ರಾಜ್ಯಸಭಾ ಕಲಾಪವೂ ಮುಂದೂಡಿಕೆ

ಹಾಲಿ ಸಂಸದ ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿ ರಾಜ್ಯಸಭೆ ಕಲಾಪವನ್ನು 1 ಗಂಟೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News