ಬೆಂಗಳೂರು: ವೈದ್ಯಕೀಯ ಸಿಬ್ಬಂದಿಯ ಸೋಗಿನಲ್ಲಿ ಬಂದು ಪಿಸ್ತೂಲು ತೋರಿಸಿ ದರೋಡೆ; ಪ್ರಕರಣ ದಾಖಲು
Update: 2021-11-30 13:24 GMT
ಬೆಂಗಳೂರು, ನ.30: ವೈದ್ಯಕೀಯ ಸಿಬ್ಬಂದಿ ಹೆಸರಿನಲ್ಲಿ ದುಷ್ಕರ್ಮಿಗಳು ಪಿಸ್ತೂಲ್ ತೋರಿಸಿ ದರೋಡೆ ಮಾಡಿರುವ ಘಟನೆ ನಗರದ ಎಸ್.ಬಿ.ಎಂ ಕಾಲನಿಯಲ್ಲಿ ನಡೆದಿದ್ದು ವರದಿಯಾಗಿದೆ.
ಸಂಪತ್ ಸಿಂಗ್ ಎನ್ನುವವರ ಮನೆಗೆ ನುಗ್ಗಿದ ದುಷ್ಕರ್ಮಿಗಳ ತಂಡ, ಪಿಸ್ತೂಲ್ ತೋರಿಸಿ ಮನೆಯಲ್ಲಿದ್ದ 150 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.