ಸರಕಾರಿ ಗೌರವಗಳೊಂದಿಗೆ ನಟ ಶಿವರಾಂ ಅಂತ್ಯಕ್ರಿಯೆ

Update: 2021-12-05 15:06 GMT

ಬೆಂಗಳೂರು, ಡಿ. 6: ಕನ್ನಡ ಚಿತ್ರರಂಗದ ಹಿರಿಯ ನಟ ಎಸ್. ಶಿವರಾಂ (83) ಅವರ ಅಂತ್ಯಕ್ರಿಯೆ ಸರಕಾರಿ ಗೌರವಗಳೊಂದಿಗೆ ನಗರದ ಬನಶಂಕರಿ ಚಿತಾಗಾರದಲ್ಲಿ ರವಿವಾರ ಜರುಗಿತು.

ಸರಕಾರದ ಪರವಾಗಿ ಕಂದಾಯ ಸಚಿವ ಆರ್.ಅಶೋಕ್ ಅಂತಿಮ ನಮನ ಸಲ್ಲಿಸಿದರು. ಶಿವರಾಂ ಪುತ್ರರಾದ ರವಿಶಂಕರ ಹಾಗೂ ಲಕ್ಷ್ಮೀಶ ಅವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

ಇದಕ್ಕೂ ಮುನ್ನ ಶಿವರಾಂ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. 

ಚಿತ್ರರಂಗದ ಕಲಾವಿದರಾದ ರಾಮಕೃಷ್ಣ, ಶಿವರಾಜ್‍ಕುಮಾರ್, ಎಸ್.ನಾರಾಯಣ್, ಅನಿರುದ್ಧ್, ದ್ವಾರಕೀಶ್, ಉಮಾಶ್ರೀ, ಯೋಗರಾಜ ಭಟ್, ಗಿರಿಜಾ ಲೋಕೇಶ್, ದೊಡ್ಡರಂಗೇಗೌಡ, ಶ್ರೀನಾಥ್, ಅನಂತನಾಗ್, ರಾಘವೇಂದ್ರ ರಾಜಕುಮಾರ್, ರಮೇಶ್ ಅರವಿಂದ್, ಪ್ರೇಮ, ಸುಂದರರಾಜ್, ಜೈಜಗದೀಶ್, ರಾಕ್‍ಲೈನ್ ವೆಂಕಟೇಶ್, ಜಯಮಾಲಾ, ಸುಧಾರಾಣಿ, ಹೇಮಚೌಧರಿ, ಭಾರತಿ ವಿಷ್ಣುವರ್ಧನ್, ಅಭಿನಯ, ಸತ್ಯಭಾಮ, ನಿರ್ದೇಶಕ ಸೀತಾರಾಮ್, ನಿರ್ಮಾಪಕ ಕೆ ಮಂಜು, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್, ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ, ಅನಿಲ್ ಕುಂಬ್ಳೆ ಸೇರಿದಂತೆ ಹಲವಾರು ಚಿತ್ರರಂಗದ ತಾರೆಯರು, ಸಾರ್ವಜನಿಕರು ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News