ಎನ್.ಆರ್.ನಾಗಪ್ಪಯ್ಯ
Update: 2021-12-16 13:34 GMT
ಕುಂದಾಪುರ, ಡಿ.16: ಮೂಲತ: ಕುಂದಾಪುರದ ನೇರಂಬಳ್ಳಿಯವರಾಗಿದ್ದು, ಹೈದರಾಬಾದ್ನಲ್ಲಿ ಹೊಟೇಲ್ ಉದ್ಯಮ ನಡೆಸುತಿದ್ದ ಸಾಮಾಜಿಕ ಧುರೀಣ ಎನ್.ಆರ್.ನಾಗಪ್ಪಯ್ಯ (91) ಗುರುವಾರ ಹೈದರಾಬಾದ್ನಲ್ಲಿ ನಿಧನರಾದರು.
ತನ್ನ ಅಣ್ಣ ಎನ್.ಆರ್.ನಾರಾಯಣ ರಾವ್ ಅವರೊಂದಿಗೆ ಹೊಟೇಲ್ ಉದ್ಯಮ ಸೇರಿ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತಿದ್ದ ನಾಗಪ್ಪಯ್ಯ, ಹೈದರಾಬಾದ್ನಲ್ಲಿ ಹಲವು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದರು.
ನಾಗಪ್ಪಯ್ಯ ಅವರು ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.