ಸುರತ್ಕಲ್ ವಲಯ ಸುನ್ನಿ ಮೊಹಲ್ಲಾ ಫೆಡರೇಶನ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Update: 2022-01-14 17:56 GMT

ಮುಲ್ಕಿ ಜ.14: ಸಮಸ್ತ ಉಲಮಾ ಒಕ್ಕೂಟದ ಅಧೀನ ಸಂಸ್ಥೆಯಾದ ಸುನ್ನಿ ಮೊಹಲ್ಲಾ ಫೆಡರೇಶನ್ (ಎಸ್‌ಎಂಎಫ್) ಇದರ ಸುರತ್ಕಲ್ ವಲಯ ಸದಸ್ಯತ್ವ ಅಭಿಯಾನಕ್ಕೆ ಮುಲ್ಕಿ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ಚಾಲನೆ ನೀಡಲಾಯಿತು.

ಅಭಿಯಾನ ಉದ್ಘಾಟಿಸಿ ಮಾತನಾಡಿದ ಮೌಲಾನ ಯುಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಎಲ್ಲರೂ ಸಂಘಟಿತರಾಗಿದ್ದರೆ ಏನನ್ನೂ ಸಾಧಿಸಬಹುದು ಎಂಬುದನ್ನು ಎಸ್‌ಎಂಎಫ್ ಕೇರಳದಲ್ಲಿ ತೋರಿಸಿ ಕೊಟ್ಟಿದೆ. ಹಾಗಾಗಿ ಕರ್ನಾಟಕದಲ್ಲೂ ಎಸ್‌ಎಂಎಫ್ ಸಂಘಟನೆಯನ್ನು ಬಲಪಡಿಸಬೇಕಿದೆ ಎಂದರು.

ಸುರತ್ಕಲ್ ವಲಯ ನಿರೀಕ್ಷಕ ಎಸ್‌ಬಿ ದಾರಿಮಿ ಮಾತನಾಡಿ ಮೊಹಲ್ಲಾ ಸಬಲೀಕರಣವನ್ನು ಗುರಿಯಾಗಿಟ್ಟುಕೊಂಡು ಕಾರ್ಯಚರಿಸುತ್ತಿರುವ ಎಸ್‌ಎಂಎಫ್‌ನೊಂದಿಗೆ ಪ್ರತಿ ಮೊಹಲ್ಲಾವನ್ನು ಅಂಗೀಕರಿಸಲು ಸಮಸ್ತದ ಉಲಮಾಗಳು ಕರೆ ಕೊಟ್ಟಿದೆ. ಹಾಗಾಗಿ ಇದನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಮದ್ರಸ ಮ್ಯಾನೇಜ್ಮೆಂಟ್ ಅದ್ಯಕ್ಷ ಹಾಜಿ ಎಕೆ ಜೀಲಾನಿ ಪ್ರಥಮ ಸದಸ್ಯತ್ವ ಪಡೆದುಕೊಂಡರು. ಅಬ್ದುಲ್ಲಾ ದಾರಿಮಿ, ಎಂಎಸ್ ರಿಯಾಝ್ ಫೈಝಿ ಪಲಿಮಾರ್, ಬಶೀರ್, ಹನೀಫ್ ಕೊಲ್ನಾಡ್, ಇಬ್ರಾಹಿಂ ಬೊಳ್ಳೂರು, ಮುಹಮ್ಮದ್ ಬೊಳ್ಳೂರು, ಶಿಹಾಬ್ ಚೊಕ್ಕಬೆಟ್ಟು, ಹಸನ್‌ಬಾವ ಮುಲ್ಕಿ, ಶಿಹಾಬ್ ಬೊಳ್ಳೂರು, ಮುಬೀನ್ ಕೊಲ್ನಾಡ್, ಸುಲೈಮಾನ್ ಹಾಜಿ ಬೊಳ್ಳೂರು, ರಝಾಕ್ ಅಝ್ಹರಿ, ಅಬ್ದುರ್ರಹ್ಮಾನ್ ಸಅದಿ, ಇಮ್ತಿಯಾಝ್ ಇಡ್ಯಾ, ಬದ್ರುದ್ದೀನ್, ಎಸ್‌ಎಂ ಹನೀಫ್ ಇಡ್ಯಾ, ಅಬೂಬಕರ್ ಇಡ್ಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News