ಚಾವುಂಡರಾಯ ದತ್ತಿ ಪ್ರಶಸ್ತಿಗೆ ಪ್ರೊ. ಶಾಂತಿನಾಥ ದಿಬ್ಬದ ಆಯ್ಕೆ
Update: 2022-01-14 18:50 GMT
ಬೆಂಗಳೂರು, ಜ.14: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡುವ 2021ನೆಯ ಸಾಲಿನ ಚಾವುಂಡರಾಯ ದತ್ತಿ ಪ್ರಶಸ್ತಿಗೆ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು ಹಾಗೂ ವಿಶ್ರಾಂತ ಕುಲಸಚಿವ ಪ್ರೊ. ಶಾಂತಿನಾಥ ದಿಬ್ಬದ ಆಯ್ಕೆಯಾಗಿದ್ದಾರೆ.
ಕಸಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯೊಂದರಲ್ಲಿ ಪ್ರಶಸ್ತಿಗೆ ಆಯಕೆ ಮಾಡಲಾಯಿತು. ಸಭೆಯಲ್ಲಿ ಡಾ. ಪದ್ಮಿನಿ ನಾಗರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ ಪಟೇಲ್ ಪಾಂಡು ಉಪಸ್ಥಿತರಿದ್ದರು.
ಪ್ರಶಸ್ತಿಯು 30 ಸಾವಿರ ರೂ. ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಪರಿಷತ್ತು ಪ್ರಕಟನೆಯಲ್ಲಿ ತಿಳಿಸಿದೆ.