ಬೆಂಗಳೂರು: ಬ್ಯಾಂಕಿಗೆ ನುಗ್ಗಿ ಚಾಕು ತೋರಿಸಿ ದರೋಡೆಗೈದ ಪ್ರಕರಣ; ಆರೋಪಿಯ ಬಂಧನ

Update: 2022-01-15 12:24 GMT

ಬೆಂಗಳೂರು, ಜ.15: ಬ್ಯಾಂಕಿಗೆ ನುಗ್ಗಿದ ಸುಲಿಗೆಕೋರನೊಬ್ಬ ವ್ಯವಸ್ಥಾಪಕನಿಗೆ ಚಾಕು ತೋರಿಸಿ ಬೆದರಿಸಿ 4 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಮಡಿವಾಳದ ಎಸ್‍ಬಿಐ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ಸಂಜೆ ಆರು ಗಂಟೆಯ ವೇಳೆ ಮ್ಯಾನೇಜರ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಒಳನುಗ್ಗಿದ ಆರೋಪಿಯು, ಚಾಕು ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ. 

ಕ್ಷಣಾರ್ಧದಲ್ಲಿ ಬ್ಯಾಂಕಿನಲ್ಲಿದ್ದ 4 ಲಕ್ಷ ರೂಪಾಯಿ ಹಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. 

ದರೋಡೆಕೋರನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನಾ ಸ್ಥಳಕ್ಕೆ ಧಾವಿಸಿದ ಮಡಿವಾಳ ಪೊಲೀಸರು ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News