ತಬಲಾ ಕಲಾವಿದೆ ಹಿಮಾಂಗಿ ಡಿ. ಉಳ್ಳಾಲ್ ಗೆ ಪ್ರಶಸ್ತಿ

Update: 2022-01-15 17:06 GMT

ಮಂಗಳೂರು, ಜ.15: ಕಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಸಮ್ಮೇಳನ 'ಗ್ಯಾನ್ ಮಂಚ್‌' ಕಾರ್ಯಕ್ರಮದಲ್ಲಿ ತಬಲಾ ಕಲಾವಿದೆ ಹಿಮಾಂಗಿ ಡಿ. ಉಳ್ಳಾಲ್ ಗೆ ತಾಲ್ ನಂದನ್ ಪ್ರಶಸ್ತಿ ಲಭಿಸಿದೆ.

ದೀಪಕ್ ರಾಜ್ ಉಳ್ಳಾಲ್ ಹಾಗೂ ಧನಲಕ್ಷ್ಮಿ ಡಿ. ಉಳ್ಳಾಲ್ ಅವರ ಪುತ್ರಿಯಾಗಿರುವ ಹಿಮಾಂಗಿ ಡಿ. ಉಳ್ಳಾಲ್ ಸುರತ್ಕಲ್ ಗೋವಿಂದ ದಾಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದಾರೆ. ಸಂಗೀತ, ಗಾಯನ, ನೃತ್ಯ, ಚಿತ್ರಕಲೆ, ಭಗವದ್ಗೀತೆ ಕಂಠಪಾಠಗಳಲ್ಲಿಯೂ ಪರಿಣಮತಿ ಪಡೆದಿದ್ದಾರೆ.

ಪ್ರಾಥಮಿಕ ತಬಲಾ ಅಭ್ಯಾಸವನ್ನು ತನ್ನ ತಂದೆಯಿಂದಲೇ ಪಡೆದ ಇವರು ವಿದ್ವಾನ್ ಮಾಧವ್ ಆಚಾರ್ಯ ಉಡುಪಿ ಹಾಗೂ ಅಸ್ಸಾಂನ ನಿರಂಜನ್ ಸಾಯಿಕ್ಯಾ ಅವರ ಬಳಿ ತಬಲಾ ವ್ಯಾಸಂಗ ಮುಂದುವರಿಸಿದ್ದಾರೆ. ಹಲವು ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳನ್ನು ಕೂಡ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News