ಜಿ.ಎಸ್. ಸಲ್ಡಾನ

Update: 2022-01-19 10:17 GMT

ಪುತ್ತೂರು, ಜ.19: ನಗರದ ಏಳ್ಮುಡಿ ಎಂಬಲ್ಲಿರುವ ಉದೈಸೂರ್ಯ ಎಂಟರ್‌ಪ್ರೈಸಸ್ ಮಳಿಗೆಯ ಮಾಲಕ, ಮೂಲತಃ ನಗರದ ನೆಲ್ಲಿಕಟ್ಟೆ ಎಂಬಲ್ಲಿನ ನಿವಾಸಿಯಾಗಿದ್ದ ಜಿ.ಎಸ್.ಸಲ್ಡಾನ(82) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಆರಂಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪುತ್ತೂರು ಡಿಪೋದಲ್ಲಿ ಕ್ಯಾಷಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ನಂತರ ಉದ್ಯೋಗ ತ್ಯಜಿಸಿ ಉದೈಸೂರ್ಯ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಫ್ಯಾನ್ಸಿ ಐಟಮ್ಸ್, ರೇಡಿಯೋ ಮತ್ತು ಹೊಲಿಗೆ ಯಂತ್ರಗಳ ಮಳಿಗೆ ನಡೆಸುತ್ತಿದ್ದರು.

ಕೆಲ ವರ್ಷಗಳ ಹಿಂದೆ ತನ್ನ ಹುಟ್ಟೂರಾದ ಮಂಗಳೂರು ತಾಲೂಕಿನ ಮೇರ್ಲಪದವಿನಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಗುರುವಾರ ಸಂಜೆ 4:30ಕ್ಕೆ ನೀರುಮಾರ್ಗ ಚರ್ಚ್ ವಠಾರದಲ್ಲಿ ನೆರವೇರಲಿ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ