ಎಸ್.ವೈ.ಎಸ್‍. ಪರ್ತಿಪ್ಪಾಡಿ ಶಾಖೆಯ ಅಧ್ಯಕ್ಷರಾಗಿ ಮುಹಮ್ಮದ್‍ ರಾದುಕಟ್ಟೆ ಆಯ್ಕೆ

Update: 2022-01-19 12:32 GMT
ಮುಹಮ್ಮದ್ ರಾದುಕಟ್ಟೆ, ಸುಲೈಮಾನ್ ಪೇರಪಡ್ಪು, ಎ.ಕೆ.ಉಸ್ತಾದ್

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನಿ ಯುವಜನ ಸಂಘ(ಎಸ್.ವೈ.ಎಸ್‍.)ದ ಪರ್ತಿಪ್ಪಾಡಿ ಶಾಖೆಯ ನೂತನ ಅಧ್ಯಕ್ಷರಾಗಿ ಎ.ಮುಹಮ್ಮದ್‍(ಮಾಮು) ರಾದುಕಟ್ಟೆ ಆಯ್ಕೆಯಾಗಿದ್ದಾರೆ.

ಪಿ.ಎಂ.ಹಕೀಂ ಪರ್ತಿಪ್ಪಾಡಿ ಅಧ್ಯಕ್ಷತೆಯಲ್ಲಿ ಪರ್ತಿಪ್ಪಾಡಿ ನೂರುಲ್ ಉಲೂಂ ಮದ್ರಸದಲ್ಲಿ ಜ.17ರಂದು ನಡೆದ ಸಂಘದ ಮಹಾಸಭೆಯಲ್ಲಿ 2022-24ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಎ.ಮುಹಮ್ಮದ್ ರಾದುಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ಪೇರಪಡ್ಪು, ಕೋಶಾಧಿಕಾರಿಯಾಗಿ ಎ.ಕೆ.ಉಸ್ತಾದ್ ಸಿ.ಎಂ.ನಗರ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಹಾಜಿ ರಾದುಕಟ್ಟೆ, ಅಬ್ದುಲ್ಲಾ ಕುಂಞಿ ಪರ್ತಿಪ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಎಸ್.ಮುಹಮ್ಮದ್ ಸುರುಳಿಮೂಲೆ, ಅಹ್ಮದ್ ಕುಂಞಿ ಹಾಜಿ ಮಂಕುಡೆ, ಮಜ್ಲಿಸುನ್ನೂರ್ ಅಮೀರ್ ಆಗಿ ವಿ.ಪಿ.ಉಮರ್ ದಾರಿಮಿ ಪರ್ತಿಪ್ಪಾಡಿ, ಕೌನ್ಸಿಲರ್ ಆಗಿ ಪಿ.ಎಂ. ಹಕೀಂ ಪರ್ತಿಪ್ಪಾಡಿ, ಸಿ.ಎಚ್.ಇಬ್ರಾಹೀಂ ಮುಸ್ಲಿಯಾರ್ ರವರನ್ನು ಆಯ್ಕೆಮಾಡಲಾಯಿತು.

ಪದಾಧಿಕಾರಿಗಳ ಆಯ್ಕೆಗೂ ಮುನ್ನ 2020-22ನೇ ಸಾಲಿನ ಆಯ-ವ್ಯಯವನ್ನು ಮಂಡಿಸಲಾಯಿತು. ಎ.ಕೆ.ಉಸ್ತಾದ್ ದುಆಗೈದರು. ಸಿ.ಎಚ್.ಇಬ್ರಾಹಿಂ ಮುಸ್ಲಿಯಾರ್ ಸ್ವಾಗತಿಸಿದರು. ವಿ.ಪಿ.ಉಮರ್ ದಾರಿಮಿ ಪರ್ತಿಪ್ಪಾಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News