ಸಂವಿಧಾನ ಪಾಲಿಸುವುದು ವಿಶ್ವಾಸದ ಭಾಗ: ಮಹಮ್ಮದ್ ಇರ್ಫಾನಿ ಫೈಝಿ

Update: 2022-01-26 09:52 GMT

ಕಲ್ಲಡ್ಕ : ದೇಶದ ಸಂವಿಧಾನವನ್ನು ಪಾಲಿಸುವುದು ಮುಸ್ಲಿಮರಿಗೆ  ವಿಶ್ವಾಸದ ಭಾಗವಾಗಿದೆ. ದೇಶಕ್ಕಾಗಿ ಪ್ರಾಣತ್ಯಾಗಕ್ಕೂ  ರೆಡಿಯಾಗಿದ್ದೇವೆ, ಸಂವಿಧಾನ  ಪಾಲಿಸಿಯೇ ಸಿದ್ಧ ಎಂದು ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ ಖತೀಬ್ ಶೇಖ್ ಮಹಮ್ಮದ್ ಇರ್ಫಾನಿ ಫೈಝಿ ಅಲ್ ಅಝ್ಹರಿ ಹೇಳಿದರು.

ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ನಡೆದ ಗಣರಾಜ್ಯೋತ್ಸವದ ಧ್ವಜಾರೋಹಣಗೈದು ಅವರು ಮಾತಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಆಡಳಿತ ಸಮಿತಿಯ ಉಪಾಧ್ಯಕ್ಷ ಮಹಮ್ಮದ್ ಹಾಜಿ ಕೆ.ಸಿ.ರೋಡ್ ವಹಿಸಿದರು. ವೇದಿಕೆಯಲ್ಲಿ ಅಬೂಬಕ್ಕರ್ ಮುರಬೈಲ್, ಜವಾಝ್, ನವಾಝ್, ಮದ್ರಸ ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್ ಸ್ವಾಗತಿಸಿದರು.  ಸದರ್  ಬಿ.ಟಿ. ಇಕ್ಬಾಲ್ ದಾರಿಮಿ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News