ಕುಂಪನಮಜಲು ಎಸ್.ಕೆ.ಎಸ್.ಬಿ.ವಿ. ಬಾಲ ಇಂಡ್ಯಾದಿಂದ ಗಣರಾಜ್ಯೋತ್ಸವ

Update: 2022-01-26 12:14 GMT

ಬಂಟ್ವಾಳ, ಜ.26: ಎಸ್.ಕೆ.ಎಸ್.ಬಿ.ವಿ. ಬಾಲ ಇಂಡ್ಯಾ ಕುಂಪನಮಜಲು ಇದರ ವತಿಯಿಂದ ಕುಂಪನಮಜಲು ಅರಫಾ ಜುಮಾ ಮಸೀದಿ ವಠಾರದಲ್ಲಿ ಬುಧವಾರ ಗಣರಾಜ್ಯೋತ್ಸವ ಆಚರಿಸಲಾಯಿತು. 

ದಾರುಸ್ಸಲಾಂ ಮದರಸ ಪಿಟಿಎ ಕುಂಪನಮಜಲು ಇದರ ಅಧ್ಯಕ್ಷ ಅಬ್ದುಲ್ ಸಲೀಮ್ ಕುಂಪನಮಜಲು ಧ್ವಜಾರೋಹಣಗೈದು ಮಾತನಾಡಿದರು.  

ಅರಫಾ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಬುಖಾರಿ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಡಾ. ಉಬೈದುಲ್ಲಾ ಅಝ್ಹರಿ ದುಅ ಮಾಡಿದರು. ಸದರ್ ಉಸ್ತಾದ್ ಅಬ್ದುಲ್ ನಾಸಿರ್ ಜಲಾಲಿ ಇರ್ಫಾನಿ ಅಲ್ ಮಖ್ದೂಮಿ ಭಾಷಣ ಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News