ಮಂಗಳೂರು: ಬೇಡಿಕೆ ಈಡೇರಿಕೆಗೆ ನೌಕರರ ಸಂಘ ಮನವಿ

Update: 2022-01-27 15:59 GMT

ಮಂಗಳೂರು, ಜ.27: ಕೇಂದ್ರ ಸರಕಾರಿ ನೌಕರರಿಗೆ ಸರಿಸಮಾನ ವೇತನ ಹಾಗೂ ಭತ್ತೆಗಳನ್ನು ರಾಜ್ಯ ಸರಕಾರಿ ನೌಕರರಿಗೂ ಜಾರಿಗೊಳಿಸಬೇಕು, ಎನ್‌ಪಿಎಸ್ ರದ್ದು, ಸರಕಾರದ ವಿವಿಧ ಇಲಾಖೆಗಳ ಖಾಲಿ ಇರುವ ಹುದ್ದೆಗಳ ಭರ್ತಿ ಸಹಿತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘವು ಶಾಸಕ ಡಾ. ಭರತ್ ಶೆಟ್ಟಿಗೆ ಮನವಿ ಸಲ್ಲಿಸಿತು.

ಜಿಲ್ಲಾ ಶಾಖೆಯ ಅಧ್ಯಕ್ಷ ಪಿ.ಕೆ.ಕೃಷ್ಣ, ಕಾರ್ಯದರ್ಶಿ ಎಚ್.ಗಣೇಶ್ ರಾವ್, ಖಜಾಂಚಿ ಅಕ್ಷಯ್ ಭಂಡಾರ್‌ಕಾರ್, ರಾಜ್ಯ ಘಟಕದ ಸದಸ್ಯೆ ಶೆರ್ಲಿ ಸುಮಾಲಿನಿ, ಉಪಾಧ್ಯಕ್ಷ ದೇವದಾಸ್, ಕಾರ್ಯಕಾರಿ ಸಮಿತಿ ಸದಸ್ಯರಾದ ಯೋಗೀಶ್ ಮೊಯ್ಲಿ, ಗಣೇಶ್ ಸುವರ್ಣ, ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News