ಬಸ್ರೂರು ಅಬ್ದುರ್ರಝಾಕ್ ಸಾಹೇಬ್
Update: 2022-01-28 06:04 GMT
ಮಂಗಳೂರು, ಜ.28: ಮೂಲತಃ ಉಡುಪಿ ಜಿಲ್ಲೆಯ ಬಸ್ರೂರಿನವರಾದ ಮಂಗಳೂರು ನಿವಾಸಿ ಬಸ್ರೂರು ಅಬ್ದುರ್ರಝಾಕ್ ಸಾಹೇಬ್(73) ಇಂದು ಬೆಳಗ್ಗೆ ಮಂಗಳೂರಿನ ವಾಸ್ ಲೇನ್ ನಲ್ಲಿರುವ ಮನೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಸರಳ, ಸಜ್ಜನ, ಸಮಾಜಮುಖಿ ವ್ಯಕ್ತಿತ್ವರಾಗಿದ್ದ ಅಬ್ದುರ್ರಝಾಕ್ ಅವರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು. ಬಳಿಕ ಮಂಗಳೂರಿನ ಡೆಲ್ಟಾ ಇನ್ಫ್ರಾ ಲಾಜಿಸ್ಟಿಕ್ಸ್ ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದರು.
ಮೃತರ ಅಂತ್ಯ ಸಂಸ್ಕಾರವು ಇಂದು ಸಂಜೆ ಬಸ್ರೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.