ದಾರುನ್ನೂರ್ ಯುಎಇ 7ನೇ ವಾರ್ಷಿಕ ಮಹಾ ಸಭೆ, ನೂತನ ಸಮಿತಿ ರಚನೆ

Update: 2022-02-04 18:48 GMT

ದುಬೈ: ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಯುಎಇ ಕಲ್ಚರಲ್ ಸೆಂಟರ್ ತನ್ನ  7ನೇ ವಾರ್ಷಿಕ ಮಹಾ ಸಭೆಯನ್ನು ದೇರಾ ದುಬೈಯಲ್ಲಿರುವ ಮಾಲಿಕ್ ರೆಸ್ಟೋರೆಂಟ್ ನಲ್ಲಿರುವ ಆಡಿಟೋರಿಯಮ್ ನಲ್ಲಿ ಸಂಶುದ್ದೀನ್ ಸೂರಲ್ಪಾಡಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನೆರವೇರಿಸಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಅತ್ತಿಪೆಟ್ಟ ಉಸ್ತಾದ್ ರವರ ಪ್ರಮುಖ ಶಿಷ್ಯರಾದ ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ ಮತ್ತು  ದಾರುನ್ನೂರ್ ಯುಎಇ  ಇದರ ಪ್ರಮುಖರಾದ ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ, ಮಹಮ್ಮದ್ ಮುಸ್ತಾಕ್ ಕದ್ರಿ, ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗ, ಅಶ್ರಫ್ ಖಾನ್ ಮಾಂತೂರು, ರವೂಫ್ ಹಾಜಿ ಕೈಕಂಬ, ಮಹಮ್ಮದ್ ಮಾಡಾವು, ಮಹಮ್ಮದ್ ಅಶ್ರಫ್ ಬಾಳೆಹೊನ್ನೂರು, ಅಶ್ರಫ್ ನಾಟೆಕಲ್ ಮೊದಲಾದವರು ಉಪಸ್ಥಿತರಿದ್ದರು.

ಸಯ್ಯದ್ ಅಸ್ಕರ್ ತಂಙಳ್ ಕೋಲ್ಪೆಯವರ ದುಆ ಬಳಿಕ ದಾರುನ್ನೂರ್ ಯುಎಇ ಕೋಶಾಧಿಕಾರಿ ಅಬ್ದುಲ್ ಸಲಾಂ ಬಪ್ಪಳಿಗೆ ಸ್ವಾಗತ ಭಾಷಣಗೈದರು.

ಸಿರಾಜುದ್ದೀನ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ದಾರುನ್ನೂರ್ ವಿದ್ಯಾ ಕೇಂದ್ರದಲ್ಲಿನ ವಿದ್ಯಾಭ್ಯಾಸದ ಗುಣಮಟ್ಟ ಮತ್ತು ನೇತೃತ್ವವನ್ನು ಕೊಂಡಾಡಿದರು.  ಈ ಸಂದರ್ಭ ಸಂಘ ಸಂಸ್ಥೆಗಳಲ್ಲಿ ಕಾರ್ಯಕರ್ತರ ಪಾತ್ರದ ಬಗ್ಗೆ ಮಾತನಾಡಿದರು. ವ್ಯಕ್ತಿಯ ಒಳಿತು ಮತ್ತು ಕೆಡುಕು ಎರಡಕ್ಕೂ ನಾವು ವಹಿಸುವ ಜವಾಬ್ದಾರಿ ಮುಖ್ಯ ಪಾತ್ರವಹಿಸುತ್ತದೆ ಮತ್ತು ನಿಸ್ವಾರ್ಥ ಸೇವೆ ನಮ್ಮ ಬದುಕನ್ನು ಯಾವ ರೀತಿ ಹಸನುಗೊಳಿಸಬಹುದು ಎಂದು ವಿವರಿಸಿದರು.

ವಾರ್ಷಿಕ ವರದಿಯನ್ನು ಮಹಮ್ಮದ್ ಶರೀಫ್ ಕೊಡ್ನೀರ್ ವಾಚಿಸಿದರು. ವಾರ್ಷಿಕ ಕಾರ್ಯ ಚಟುವಟಿಕೆಗಳ ವಿವರವನ್ನು ಮುಖ್ಯ ಲೆಕ್ಕ ಪರಿಶೋಧಕ ಅನ್ಸಾಫ್ ಪಾತೂರ್ ಮಂಡಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವು ಅನುಮೋದಿಸಲ್ಪಟ್ಟ ಬಳಿಕ ಅಧ್ಯಕ್ಷರಾದ ಸಂಶುದ್ದೀನ್ ಸೂರಲ್ಪಾಡಿ ಅವಲೋಕನ ಮಾಡಿ ಕಾರ್ಯಕರ್ತರಿಗೆ ವಿವರಣೆ ನೀಡಿದರು.

2021ರ ಸಾಲಿನ ಉತ್ತಮ ಸಾಧಕ ಸಮಿತಿಗಳಿಗೆ ವೇದಿಕೆಯಲ್ಲಿರುವ ಗಣ್ಯರಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಾರ್ಜಾ ಸ್ಟೇಟ್ ಸಮಿತಿ ಪ್ರಥಮ ಸ್ಥಾನವನ್ನೂ, ದುಬೈ ಸ್ಟೇಟ್ ಸಮಿತಿ ದ್ವಿತೀಯ ಸ್ಥಾನವನ್ನೂ, ಅಬುಧಾಬಿ ಸ್ಟೇಟ್ ಸಮಿತಿ ತೃತೀಯ ಸ್ಥಾನವನ್ನೂ ಪಡೆಯುವಲ್ಲಿ ಸಫಲವಾಯಿತು.

ಗಣ್ಯರಿಂದ ಅನಿಸಿಕೆ ವಿಭಾಗದಲ್ಲಿ ಮಹಮ್ಮದ್ ಮುಸ್ತಾಕ್ ಕದ್ರಿ, ಸುಲೈಮಾನ್ ಮೌಲವಿ ಕಲ್ಲೆಗ, ಅಶ್ರಫ್ ಖಾನ್ ಮಾಂತೂರ್, ಮಹಮ್ಮದ್ ಮಾಡಾವು, ರವೂಫ್ ಹಾಜಿ ಕೈಕಂಬ, ಅಶ್ರಫ್ ಬಾಳೆಹೊನ್ನೂರ್ ಮೊದಲಾದವರು ಸಾಂದರ್ಭಿಕವಾಗಿ ದಾರುನ್ನೂರ್ ವಿದ್ಯಾ ಕೇಂದ್ರದ ಯುಎಇಯಲ್ಲಿಯ ಕಾರ್ಯಾಚಟುವಟಿಕೆಗಳನ್ನು ಶ್ಲಾಘಿಸಿ ಮಾತನಾಡಿದರು.

ಅದ್ಯಕ್ಷರ ಭಾಷಣದಲ್ಲಿ ಸಂಶುದ್ದೀನ್ ಸೂರಲ್ಪಾಡಿಯವರು ಕಳೆದ 7 ವರ್ಷಗಳಿಂದ ಯುಎಇಯಲ್ಲಿ ದಾರುನ್ನೂರ್ ಕಲ್ಚರಲ್ ಸೆಂಟರ್  ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಶಿಪಟ್ಣದಲ್ಲಿರುವ  ವಿದ್ಯಾ ಸಂಸ್ಥೆಗೆ ಬೆನ್ನೆಲುಬಾಗಿ ಸಹಕರಿಸುತ್ತಿದೆ. ಇದರ ಕ್ರೆಡಿಟ್ ಪ್ರತಿಯೊಬ್ಬ ಕಾರ್ಯಕರ್ತನಿಗೂ ಸಲ್ಲುತ್ತದೆ. ನಮ್ಮ ಸಮಾಜ ಸೇವೆ ನಮ್ಮ ಜೀವನ ಪರ್ಯಂತ ಸಜೀವವಾಗಿ ಮುಂದುವರಿಸಿಕೊಂಡು ಹೋಗಬೇಕು ಮತ್ತು  ಮುಂದಿನ ತಲೆಮಾರಿನ ಮಕ್ಕಳು ಧಾರ್ಮಿಕ ಮತ್ತು ಲೌಕಿಕ ವಿದ್ಯೆಯಿಂದ ವಂಚಿತರಾಗದಂತೆ ಅದಕ್ಕೆ ಬೇಕಾದ ಅಡಿಪಾಯ  ಹಾಕಿ ಭದ್ರ ಪಡಿಸಬೇಕು ಎಂದು ವಿವರಿಸಿ, ಕಳೆದ ಮೂರು ವರ್ಷಗಳ ತನ್ನ ಅಧ್ಯಕ್ಷತೆಯ ಅಧಿಕಾರಾವಧಿಯಲ್ಲಿ ತನ್ನ ನಡೆನುಡಿಗಳಲ್ಲಿ ಯಾರಿಗಾದರೂ  ನೋವಾಗಿದ್ದರೆ ಮನ್ನಿಸಲು ವಿನಂತಿಸಿ,  2021ರ ಸಾಲಿನ ಸಮಿತಿಯನ್ನು ಭರ್ಕಾಸ್ತುಗೊಳಿಸಿರುವುದಾಗಿ ಘೋಷಿಸಿ, 2022ರ ಸಾಲಿಗೆ ನೂತನ ಸಮಿತಿಯ ರಚನೆಗೆ ಅನುವು ಮಾಡಿಕೊಟ್ಟರು. 

ಚುನಾವಣಾಧಿಕಾರಿಯಾಗಿ ಮಹಮ್ಮದ್ ಶರೀಫ್ ಕಾವು ಅವರನ್ನು ನೇಮಿಸಲಾಯಿತು. 2022ರ ಸಾಲಿಗೆ ದಾರುನ್ನೂರ್ ಯುಎಇ ರಾಷ್ಟ್ರೀಯ ಸಮಿತಿಗೆ ಸಾರಥಿಗಳನ್ನಾಗಿ ಆರಿಸಲಾಯಿತು.

ಮುಖ್ಯ ಪೋಷಕರು –  ನಿಸಾರ್ ಅಹ್ಮದ್ ಕಾರ್ಕಳ

ಪೋಷಕರು  -  ಅಬ್ದುಲ್ಲಾ ಹಾಜಿ ಮದುಮೂಲೆ, ಅಹ್ಮದ್ ಮತೀನ್ ಚಿಲ್ಮಿ ಮಂಗಳೂರು

ಪ್ರಮುಖ ಧಾರ್ಮಿಕ ಸಲಹೆಗಾರ   - ಅಬ್ದುಲ್ ಸಲಾಂ ಬಾಖವಿ

ಪ್ರಮುಖ ಸಲಹೆಗಾರ  - ಸಂಶುದ್ದೀನ್ ಸೂರಲ್ಪಾಡಿ

ಸಲಹಾ ಸಮಿತಿ ಪ್ರಮುಖರು – ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ, ಮುಹಿದ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ, ಸಂಶುದ್ದೀನ್ ಕಲ್ಕಾರ್, ಉಸ್ತಾದ್ ಶೌಕತ್ ಅಲಿ ಹುದವಿ, ಸಲೀಂ ಅಲ್ತಾಫ್ ಫರಂಗಿಪೇಟೆ, ಮಹಮ್ಮದ್ ರಫೀಕ್ ಆತೂರು, ಮುಹ್ಸಿನ್ ಅಹ್ಮದ್ ಮೂಡುಬಿದಿರೆ, ಇಕ್ಬಾಲ್ ಬಾವ ಬಂಟ್ವಾಳ್, ಅಶ್ರಫ್ ಖಾನ್ ಮಾಂತೂರ್, ಸಂಶುದ್ದೀನ್ ವಳಪಟ್ಟಣಂ, ಯೂಸುಫ್ ಈಶ್ವರಮಂಗಲ, ಬಶೀರ್ ಬಂಟ್ವಾಳ್, ಅಡ್ವೋಕೇಟ್ ಇಬ್ರಾಹಿಂ ಖಲೀಲ್, ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ, ಮಹಮ್ಮದ್ ಕಲ್ಲಾಪು, ಜಬ್ಬಾರ್ ಎಡನೀರ್, ಅಶ್ರಫ್ ನಾಟೆಕಲ್, ಅನ್ವರ್ ಹುಸೈನ್  ಅಡ್ಡೂರ್.

ಗೌರವಾದ್ಯಕ್ಷರು  - ಮಹಮ್ಮದ್ ಮುಸ್ತಾಕ್ ಕದ್ರಿ

ಅದ್ಯಕ್ಷರು  - ಮಹಮ್ಮದ್ ಮಾಡಾವು

ಉಪಾದ್ಯಕ್ಷರು –  ಅಬ್ದುಲ್ ರವೂಫ್ ಹಾಜಿ ಕೈಕಂಬ, ಮಹಮ್ಮದ್ ಅಶ್ರಫ್ ಬಾಳೆ ಹೊನ್ನೂರ್, ಮಹಮ್ಮದ್ ರಫೀಕ್ ಸುರತ್ಕಲ್

ಪ್ರಧಾನ ಕಾರ್ಯದರ್ಶಿ –  ಬದ್ರುದ್ದೀನ್ ಹೆಂತಾರ್

ಕಾರ್ಯದರ್ಶಿ – ಮಹಮ್ಮದ್ ಸಾಜಿದ್ ಬಜ್ಪೆ, ಮಹಮ್ಮದ್ ಶಬೀರ್ ಸಕಲೇಶಪುರ, ಸುಹೈಲ್ ಹಸನ್ ಚೊಕ್ಕಬೆಟ್ಟು

ಕೋಶಾಧಿಕಾರಿ  - ಅಬ್ದುಲ್ ಸಲಾಂ ಬಪ್ಪಳಿಗೆ

ಲೆಕ್ಕ ಪರಿಶೋಧಕ  - ಅನ್ಸಾಫ್ ಪಾತೂರ್

ಸಹ ಲೆಕ್ಕ ಪರಿಶೋಧಕ – ನಾಸಿರ್ ಬಪ್ಪಳಿಗೆ

ಸಂಘಟನೆ ಕಾರ್ಯದರ್ಶಿ  - ನವಾಝ್ ಬಿ.ಸಿ ರೋಡ್

ಸಹ ಸಂಘಟನೆ ಕಾರ್ಯದರ್ಶಿ - ಅಶ್ರಫ್ ಪರ್ಲಡ್ಕ, ಸಫಾ ಇಸ್ಮಾಯಿಲ್ ಬಜ್ಪೆ

ಮೀಡಿಯಾ ಕೋರ್ಡಿನೇಟರ್ – ಸಿರಾಜ್ ಬಿ.ಸಿ ರೋಡ್ , ಅಶ್ರಫ್ ಬಾಂಬಿಲ

ಧಾರ್ಮಿಕ ಸಲಹೆಗಾರ  - ಸುಲೈಮಾನ್ ಮೌಲವಿ ಕಲ್ಲೆಗ , ಸಾಹುಲ್ ಬಿ.ಸಿ ರೋಡ್, ಅಬ್ದುಲ್ ರಝಾಕ್ ಪಾತೂರು, ಸಿರಾಜುದ್ದೀನ್ ಫೈಝಿ ಬಂಟ್ವಾಳ್  

ಕನ್ವೀನರ್  - ನೂರ್ ಮಹಮ್ಮದ್ ನೀರ್ಕಜೆ, ಅಬ್ದುಲ್ ಖಾದರ್ ಬೈತಡ್ಕ, ಹನೀಫ್ ಕೆ.ಪಿ ಮೂಡುಬಿದಿರೆ, ಇಲ್ಯಾಸ್ ಕಡಬ, ಶರೀಫ್ ಕೊಡ್ನೀರ್, ಶರೀಫ್ ಕಾವು, ಅಬ್ದುಲ್ ಲತೀಫ್ ಕೌಡಿಚ್ಚಾರ್, ಅಶ್ರಫ್ ಅರ್ತಿಕೆರೆ ಬಶೀರ್ ಕೆಮ್ಮಿಂಜೆ, ಅಬ್ದುಲ್ ರಝಾಕ್ ಸೋಂಪಾಡಿ, ಉಸ್ಮಾನ್ ಮರೀಲ್, ಅಬೂಬಕ್ಕರ್ ಸಿದ್ದೀಕ್ ಮೂಡುಬಿದಿರೆ, ಅಶ್ರಫ್ ಪಾವೂರ್, ನವಾಝ್ ಮನಲ್, ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ಅಬ್ಬಾಸ್ ಕೇಕುಡೆ, ಸಂಶುದ್ದೀನ್ ಹಮೀದ್ ಮೂಡುಬಿದಿರೆ, ಇಸ್ಮಾಯಿಲ್ ಮುಂಧೀರ್ ತೋಡಾರ್, ಜಲೀಲ್ ಗುರುಪುರ, ಜಬ್ಬಾರ್ ಕಲ್ಲಡ್ಕ.

ಕಾರ್ಯಕಾರಿ ಸಮಿತಿ ಸದಸ್ಯರು – ಸಮೀರ್ ಇಬ್ರಾಹಿಂ ಕಲ್ಲರೆ, ಅಶ್ರಫ್ ಕೆಮ್ಮೀಂಜೆ, ಅಬ್ದುಲ್ ರಹ್ಮಾನ್ ಸಜಿಪ, ಅಬ್ದುಲ್ ಖಾದರ್ ಕಾರ್ಕಳ, ಮುನೀರ್ ಕಾಙಂಗಾಡ್, ಝುಬೈರ್ ತೋಡಾರ್, ಯೂನುಸ್ ತಲಪಾಡಿ, ತಾಹಿರ್ ಹೆಂತಾರ್, ಇಬ್ರಾಹಿಂ ಅಬೂಬಕ್ಕರ್ ಕುಂಡಾಜೆ, ಜಾಬಿರ್ ಬಪ್ಪಳಿಗೆ, ಅಬ್ದುಲ್ ನಾಸಿರ್ ಸುರತ್ಕಲ್, ಅಬ್ದುಲ್ ಅಝೀಝ್ ಸೋಂಪಾಡಿ, ಅಝ್ಹರುದ್ದೀನ್ ಹಂಡೇಲ್, ನಿಝಾಮ್ ತೋಡಾರ್, ಅನ್ವರ್ ಮಾನಿಲ.

ನೂತನ ಪದಾಧಿಕಾರಿಗಳ ಆಸನ ಸ್ವೀಕಾರದ ಬಳಿಕ  ಎಲ್ಲರೂ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ನೂತನ ಅಧ್ಯಕ್ಷರ ವ್ಯಕ್ತಿ ಪರಿಚಯ ಮತ್ತು ಅನುಭವ ವಿವರಿಸಿ ನೂತನ ಸಮಿತಿಗೆ ಶುಭ ಹಾರೈಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News