ಮಂಡ್ಯ: ತಮ್ಮಣ್ಣ ನಿಧನ
Update: 2022-02-14 17:39 GMT
ಮಂಡ್ಯ, ಫೆ.14: ಪ್ರಗತಿಪರ ಹೋರಾಟಗಾರ, ಸಿಪಿಎಂ ಮುಖಂಡ, ಕರ್ನಾಟಕ ಪ್ರಾಂತ ರೈತ, ಕೃಷಿ ಕೂಲಿಕಾರರ ಸಂಘ ಮತ್ತು ಕಾರ್ಮಿಕ ಮುಖಂಡ ಟಿ.ಯಶವಂತ ಅವರ ತಂದೆ ಚನ್ನೇಗೌಡ ಅವರ ಪುತ್ರ ತಮ್ಮಣ್ಣ ಸೋಮವಾರ ಹಠಾತ್ ಹೃದಯಾಘಾತದಿಂದ ನಿಧನರಾದರು.
ಅವರಿಗೆ 72 ವರ್ಷ ಆಗಿತ್ತು. ಅಂತ್ಯಕ್ರಿಯೆ ನಾಳೆ (ಮಂಗಳವಾರ) 11 ಗಂಟೆಗೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ತೊರೆಶೆಟ್ಟಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.