×
Ad

ಮಂಗಳೂರು: ಬಸ್ ಢಿಕ್ಕಿ; ವಿದ್ಯಾರ್ಥಿ ಮೃತ್ಯು

Update: 2022-02-21 23:01 IST

ಮಂಗಳೂರು, ಫೆ.21: ನಗರ ಹೊರವಲಯದ ಶಕ್ತಿನಗರ ಪದವು ಎಂಬಲ್ಲಿ ಸೋಮವಾರ ಅಪರಾಹ್ನ ನಡೆದ ರಸ್ತೆ ಅಪಘಾತವೊಂದರಲ್ಲಿ ಬೈಕ್ ಸವಾರ. ವಿದ್ಯಾರ್ಥಿ ಪ್ರಜ್ವಲ್ ಸಾಲ್ಯಾನ್ (18) ಮೃತಪಟ್ಟಿದ್ದಾರೆ.

ಶಕ್ತಿನಗರ ರುದ್ರಭೂಮಿ ಸಮೀಪದ ನಿವಾಸಿಯಾಗಿರುವ ಪ್ರಜ್ವಲ್ ಸಾಲ್ಯಾನ್ ನಗರದ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಬೈಕ್‌ಗೆ ಢಿಕ್ಕಿ ಹೊಡೆದ ಬಸ್ ಬಳಿಕ ಪ್ರಜ್ವಲ್ ರ ದೇಹದ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News