ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ದೂರು

Update: 2022-03-07 10:42 GMT
 ಅರುಣ್ ಬಡಿಗೇರ್ 

ಮಂಗಳೂರು, ಮಾ.7: ಖಾಸಗಿ ಟಿವಿ ವಾಹಿನಿ 'ಪಬ್ಲಿಕ್ ಟಿವಿ ನ್ಯೂಸ್ ಚಾನೆಲ್ ನ ಚರ್ಚಾ ಕಾರ್ಯಕ್ರಮವೊಂದರಲ್ಲಿ ಅದರ ನಿರೂಪಕ ಅರುಣ್ ಬಡಿಗೇರ್ ಎಂಬಾತ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ

ಮುಲ್ಕಿ ಕಾರ್ನಾಡು ಗ್ರಾಮದ ಕೆ.ಎಸ್. ರಾವ್ ನಗರ ನಿವಾಸಿ ಎಸ್.ಅಬ್ದುಲ್ ಖಾದರ್ ಎಂಬವರು ಈ ದೂರು ನೀಡಿದ್ದಾರೆ.

ಪಬ್ಲಿಕ್ ಟಿವಿ ನ್ಯೂಸ್ ಚಾನೆಲ್ ನಲ್ಲಿ ಫೆ.22ರಂದು ರಾತ್ರಿ 7:30ಕ್ಕೆ ಪ್ರಸಾರವಾದ ಚರ್ಚಾಕೂಟದಲ್ಲಿ ನಿರೂಪಕರಾಗಿದ್ದ ಅರುಣ್ ಬಡಿಗೇರ್ ಮುಸ್ಲಿಮ್ ಸಮುದಾಯವನ್ನು ಅವಮಾನಿಸಿ ಮಾತನಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News