×
Ad

ದಶಮಾನೋತ್ಸವ ಸಂಭ್ರಮ: ಇಂಡಿಯಾನಾ ಹಾಸ್ಪಿಟಲ್‌ ನಿಂದ ಶ್ರೇಷ್ಠ ವೈದ್ಯರಿಗೆ ಸನ್ಮಾನ

Update: 2022-04-05 17:23 IST

ಮಂಗಳೂರು : ನಗರದ ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ವತಿಯಿಂದ ಆರೋಗ್ಯ ಕ್ಷೇತ್ರದಲ್ಲಿನ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ನಾಲ್ವರು ಶ್ರೇಷ್ಠ ವೈದ್ಯರನ್ನು ಸನ್ಮಾನಿಸಲಾಯಿತು.

ಖ್ಯಾತ ನರ ಶಸ್ತ್ರಚಿಕಿತ್ಸಕ ಡಾ.ಕೆ.ವಿ.ದೇವಾಡಿಗ, ಪುತ್ತೂರಿನ ಆದರ್ಶ ಆಸ್ಪತ್ರೆಯ ನಿರ್ದೇಶಕ ಡಾ.ಮೇನಾಲ್ ಕೃಷ್ಣಪ್ರಸಾದ್, ಮಂಗಳೂರು ಕೆಎಂಸಿ ವೈದ್ಯ ಮತ್ತು ಪ್ರಾಧ್ಯಾಪಕ ಪ್ರೊ. ಡಾ.ಮುಹಮ್ಮದ್ ಇಸ್ಮಾಯೀಲ್ ಮತ್ತು ಇಂಡಿಯಾನಾ ಆಸ್ಪತ್ರೆಯ ಮುಖ್ಯ ಕಾರ್ಡಿಯೊ ಥೋರಾಸಿಕ್ ಮತ್ತು ಹಾರ್ಟ್ ಟಾನ್ಸ್ ಪ್ಲಾಂಟ್ ಸರ್ಜನ್ ಹಾಗೂ ಕಾರ್ಡಿಯೊ ವಾಸ್ಕುಲರ್ ಸೈನ್ಸ್ ನಿರ್ದೇಶಕ, ಡಾ.ಎಂ.ಕೆ.ಮೂಸಾ ಕುಂಞಿ ಅವರನ್ನು ಇಂಡಿಯಾನಾ ಆಸ್ಪತ್ರೆಯ ದಶಮಾನೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಅವರ ನಿಸ್ವಾರ್ಥ ಸೇವೆಗಾಗಿ ವೈದ್ಯರನ್ನು ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಹೃದ್ರೋಗ ತಜ್ಞ ಡಾ.ಯೂಸುಫ್ ಕುಂಬ್ಳೆ ಶ್ಲಾಘಿಸಿದರು. ‘ಈ ಸಂದರ್ಭದಲ್ಲಿ ವೈದ್ಯರ ಅಸಾಧಾರಣ ಕೊಡುಗೆಗೆಳನ್ನು ನಾವು ಹೆಮ್ಮೆಯಿಂದ ಗುರುತಿಸುತ್ತೇವೆ. ಅವರು ನಮಗೆಲ್ಲರಿಗೂ ಸ್ಫೂರ್ತಿದಾಯಕರು’ ಎಂದು ಅವರು ಹೇಳಿದರು.

ಇಂಡಿಯಾನಾ ಆಸ್ಪತ್ರೆಯು 10 ವರ್ಷಗಳ ಮೈಲುಗಲ್ಲನ್ನು ದಾಟಿದೆ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ. ನಾವು ಕಾರ್ಪೊರೇಟ್ ಆಸ್ಪತ್ರೆಯಾಗಿದ್ದರೂ ಮಾನವ ಸೇವೆ ದೇವರ ಸೇವೆ ಎಂಬ ನಂಬಿಕೆಯಿಂದ ಸಾಧ್ಯವಾದಷ್ಟು ಸಮಾಜಕ್ಕೆ ಮರಳಿ ನೀಡಲು ಚೈತ್ಯನ್ಯದಿಂದ ಶ್ರಮಿಸುತ್ತಿದ್ದೇವೆ ಎಂದು ಡಾ.ಯೂಸುಫ್ ಕುಂಬ್ಳೆ ಹೇಳಿದರು.

ಇಂಡಿಯಾನಾ ಆಸ್ಪತ್ರೆಯ ವೈದ್ಯ, ತೀವ್ರ ನಿಗಾ ಮತ್ತು ಮಧುಮೇಹ ತಜ್ಞ್ಞ ಡಾ.ಆದಿತ್ಯ ಭಾರದ್ವ್ವಾಜ್ರನ್ನು ಸಾಂಕ್ರಾಮಿಕ ಸಮಯದಲ್ಲಿ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ‘ಅತ್ಯುತ್ತಮ ವೈದ್ಯ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಉದ್ಯೋಗಿಗಳ ನಿಷ್ಠಾವಂತ ಸೇವೆಯನ್ನು ಗುರುತಿಸುವ ಸಲುವಾಗಿ ಆಸ್ಪತ್ರೆಯಲ್ಲಿ 10ವರ್ಷ ಸೇವೆ ಪೂರ್ಣಗೊಳಿಸಿದ 15 ಸಿಬ್ಬಂದಿ ಸದಸ್ಯರನ್ನು ಕೂಡ ಗೌರವಿಸಲಾಯಿತು.

ಹತ್ತನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಂಗಳೂರಿನ ಯೆನೆಪೊಯ ಡೀಮ್-್ಡ ಟು-ಬಿ-ಯೂನಿವರ್ಸಿಟಿಯ ಕುಲಪತಿ ಯೆನೆಪೊಯ ಅಬ್ದುಲ್ಲ ಕುಂಞಿ, ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ.ರಿಚಡರ್ರ್ ಅಲೋಶಿಯಸ್ ಕೊಯೆಲ್ಲೊ, ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಶಾಸಕರಾದ ವೇದವ್ಯಾಸ ಕಾಮತ್, ವೇದವ್ಯಾಸ ಕಾಮತ್, ಎಂಎಲ್ಸಿ ಬಿ.ಎಂ.ಫಾರೂಕ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಇಂಡಿಯಾನಾ ಆಸ್ಪತ್ರೆಯೆ ಅಧ್ಯಕ್ಷ ಡಾ.ಅಲಿ ಕುಂಬ್ಳೆ ಸ್ವಾಗತಿಸಿದರು. ಉಪಾಧ್ಯಕ್ಷ ಅಬ್ದುಲ್ಲತೀಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News