ಎ.21ಕ್ಕೆ ಬೆಂಗಳೂರಿನಲ್ಲಿ ಬೃಹತ್ ರೈತ ಸಮಾವೇಶ: ದೆಹಲಿ ಸಿಎಂ ಕೇಜ್ರಿವಾಲ್‍ಗೆ ಆಹ್ವಾನ

Update: 2022-04-13 14:40 GMT
photo- pti (ಅರವಿಂದ ಕೇಜ್ರಿವಾಲ್)

ಬೆಂಗಳೂರು, ಎ.13: ಪರ್ಯಾಯ ರಾಜಕಾರಣದ ಬಗ್ಗೆ ಚರ್ಚೆ ನಡೆಸಲು ಎ.21ರಂದು ರೈತ ಸಂಘದಿಂದ ನಗರದಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದು, ಹೊಸದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಚಾಲನೆ ನೀಡಲಿದ್ದಾರೆ. 

ಹೊಸ ರಾಜಕೀಯ ಪಕ್ಷ ಸ್ಥಾಪಿಸಬೇಕೋ ಅಥವಾ ಆಮ್ ಆದ್ಮಿ ಪಕ್ಷದಡಿ ಸ್ಪರ್ಧಿಸಬೇಕೋ ಎಂಬುದು ಅಂದು ನಿರ್ಧಾರವಾಗಲಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಚುನಾವಣಾ ಅಖಾಡಕ್ಕಿಳಿಯಲು ರೈತ ಸಂಘ ಮುಂದಾಗಿದೆ. 

ತಾವೇ ಖುದ್ದು ಚುನಾವಣೆಗೆ ಸ್ಪರ್ಧಿಸುತ್ತೇನೆ. ಶಕ್ತಿ ಪ್ರದರ್ಶನಕ್ಕೆ ಎ.21ರಂದು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ರೈತರ ಸಮಾವೇಶ ಆಯೋಜಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News