`ಹದಿನೈದು ವರ್ಷ ಕಳೆದರೂ, ವರ್ಗಾವಣೆ ಸಿಗಲಿಲ್ಲ': ಬೆಂಗಳೂರಿನಲ್ಲಿ ಸರಕಾರಿ ಪ್ರಾಥಮಿಕ ಶಿಕ್ಷಕರಿಂದ ಪ್ರತಿಭಟನೆ

Update: 2022-04-19 14:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.19: ಶಿಕ್ಷಕರಾಗಿ ಹದಿನೈದು ವರ್ಷಗಳು ಸೇವೆ ಸಲ್ಲಿಸಿದರೂ, ಸ್ವಂತ ಊರಿಗೆ ವರ್ಗಾವಣೆ ಮಾಡಿಲ್ಲ. ಹಾಗಾಗಿ ವರ್ಗಾವಣೆ ಮಾಡಿ ಇಲ್ಲವಾದರೆ ವಿಷವನ್ನು ನೀಡಿ ಎಂದು ಸರಕಾರಿ ಪ್ರಾಥಮಿಕ ಶಿಕ್ಷಕರು, ಮಂಗಳವಾರ ನಗರದ ಕಬ್ಬನ್ ಪಾರ್ಕ್‍ನ ಸರಕಾರಿ ನೌಕರರ ಸಂಘದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಸೇವೆಗೆ ಸೇರಿದ ದಿನದಿಂದ ಒಂದೇ ಶಾಲೆಯಲ್ಲಿ ಶಿಕ್ಷಕರು ಕೆಲಸ ಮಾಡುತ್ತಿದ್ದು, ಕುಟುಂಬದಿಂದ ದೂರವಾಗಿ ಖಿನ್ನತೆ ಒಳಗಾಗುತ್ತಿದ್ದೇವೆ. ಹದಿನೈದು ವರ್ಷಗಳಿಂದ ವರ್ಗಾವಣೆ ಇಲ್ಲಿದೆ ಇರುವುದರಿಂದ ಸಂಬಂಧಗಳು ದೂರ ಆಗುತ್ತಿವೆ. ಇದರಿಂದಾಗಿ ಶಿಕ್ಷಕರ ಕುಟುಂಬಗಳಲ್ಲಿ ಅನೇಕ ಅಹಿತಕರ ಘಟನೆಗಳು ನಡೆದಿವೆ. ಸೇವಾವಧಿಯಲ್ಲಿ ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಪ್ರತಿಭನಾಕಾರರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News