ಅಕ್ಕಯ್ ಪದ್ಮಶಾಲಿ, ಮನೋಹರಚಂದ್ರ ಪ್ರಸಾದ್ಗೆ 'ಫಾದರ್ ಚಸರಾ ದತ್ತಿ ಪ್ರಶಸ್ತಿ'
Update: 2022-04-21 20:00 IST
ಬೆಂಗಳೂರು, ಎ.21: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎ. 6ರಂದು ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 2022ರ ಸಾಲಿನ “ಫಾದರ್ ಚಸರಾ ಕನ್ನಡ ಸಂಸ್ಕೃತಿ ದತ್ತಿ ಪ್ರಶಸ್ತಿ”ಗೆ ಸಾಮಾಜಿಕ ಕಾರ್ಯಕರ್ತರಾದ ಡಾ. ಅಕ್ಕಯ್ ಪದ್ಮಶಾಲಿ ಹಾಗೂ ರೆವರೆಂಡ್ ಡಾ. ಡಿ. ಮನೋಹರಚಂದ್ರ ಪ್ರಸಾದ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪ್ರಶಸ್ತಿಯು ತಲಾ 10 ಸಾವಿರ ರೂ.ಗಳ ನಗದು ಜೊತೆಗೆ ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿರುತ್ತದೆ ಎಂದು ಪರಿಷತ್ ಪ್ರಕಟಣೆ ತಿಳಿಸಿದೆ.