ಕೋಲ್ಕತ್ತಾದಲ್ಲಿ ಕರಾವಳಿಯ 15 ಕಲಾವಿದರ ಕಲಾಕೃತಿಗಳ ಪ್ರದರ್ಶನ
Update: 2022-04-25 12:36 GMT
ಮಂಗಳೂರು: ಕೋಲ್ಕತ್ತಾದ ಗ್ಯಾಲರಿ ಚಾರುಬಸೋನಾ ಅವರ ಆಹ್ವಾನದ ಮೇರೆಗೆ ನಗರದ ಆರ್ಟ್ ಕೆನರಾ ಟ್ರಸ್ಟ್ ಕರಾವಳಿಯ 15 ಕಲಾವಿದರ ಚಿತ್ರಕಲೆ, ಶಿಲ್ಪಗಳು ಮತ್ತು ಛಾಯಾಚಿತ್ರಗಳ ಪ್ರದರ್ಶನವು ಕೋಲ್ಕತ್ತಾದಲ್ಲಿ ನಡೆದಿದೆ.
'ವನ್ಸೆಲ್ಫ್ ಆ್ಯಂಡ್ ದಿ ಅದರ್ ಸೆಲ್ಫ್ - ಟ್ರಾನ್ಸ್ಪೋಸಿಂಗ್ ಎಕ್ಸ್ಪೀರಿಯನ್ಸ್’ ಎಂಬ ಶೀರ್ಷಿಕೆಯಡಿ ನಡೆಯುತ್ತಿರುವ ಪ್ರದರ್ಶನದಲ್ಲಿ ರಾಜೇಂದ್ರ ಕೇದಿಗೆ, ಹರೀಶ್ ಕೊಡಿಯಾಲಬೈಲ್, ಜನಾರ್ದನ ಹಾವಂಜೆ, ರೇಶ್ಮಾ ಶೆಟ್ಟಿ ಮತ್ತಿತರ ಕಲಾ ಕೃತಿಗಳಿವೆ. ಆರ್ಟ್ ಕೆನರಾ ಟ್ರಸ್ಟ್ನ ಅಧ್ಯಕ್ಷ ಮತ್ತು ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಷ್ ಚಂದ್ರ ಬಸು ತಂಡದ ನೇತೃತ್ವ ವಹಿಸಿದ್ದಾರೆ.