ಪಣಂಬೂರು; ಜಾನುವಾರು ಕಳವು ಆರೋಪ: ನಾಲ್ಕು ಮಂದಿ ಸೆರೆ

Update: 2022-05-02 14:42 GMT

ಪಣಂಬೂರು : ಇಲ್ಲಿನ‌ ಪೊಲೀಸ್ ಠಾಣೆ ವ್ಯಾಪ್ತಿಯ ಕೆಳಗಿನ ತೋಕೂರು ಮಹಾಬಲ‌ ಪೂಜಾರಿ ಎಂಬವರ‌ ಕೊಟ್ಟಿಗೆಯಿಂದ ದನಗಳನ್ನು ಕಳವುಗೈದ ಆರೋಪದಲ್ಲಿ ಮೂವರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಜೋಕಟ್ಟೆ ನಿವಾಸಿಗಳಾದ ಇಸ್ಮಾಯೀಲ್, ಸಮೀರ್ , ಇಲ್ಯಾಸ್, ದಾವೂದ್ ಎಂದು ಪೊಲೀಸರು‌ ಮಾಹಿತಿ‌ ನೀಡಿದ್ದಾರೆ.

ಬಂಧಿತರಿಂದ ಕಾರು, ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ‌‌ ಎಂದು ಇಲಾಖೆ ಮಾಹಿತಿ ನೀಡಿದೆ. ಪ್ರಕರಣ ಸಂಬಂಧ‌ ಆರೋಪಿಗಳನ್ನು ಬಂಧಿಸಿದ ಪೊಲೀಸರು ಸೋಮವಾರ ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News