ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಕ್ರೀಡಾಪಟು, ಸಂಘಟಕರನ್ನು ಪ್ರಶಂಸಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ

Update: 2022-05-03 16:42 GMT

ಬೆಂಗಳೂರು:  ಖೇಲೋ ಇಂಡಿಯಾ ಯೂನಿವರ್ಸಿಸಿಟಿ ಗೇಮ್ಸ್‌ನ ಎರಡನೇ ಆವೃತ್ತಿ ವಿಜೃಂಭಣೆಯಿಂದ  ಸಮಾಪನಗೊಂಡಿತು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಗೃಹ ಸಚಿವ  ಅಮಿತ್‌ ಶಾ ಅವರು, ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದಿದ್ದ ಜೈನ್‌ ವಿಶ್ವವಿದ್ಯಾನಿಲಯ ತಂಡಕ್ಕೆ ಟ್ರೋಫಿಯನ್ನು ನೀಡಿ ಗೌರವಿಸಿದರು. 

ಕರ್ನಾಟಕದ ಮುಖ್ಯ ಮಂತ್ರಿ  ಬಸವರಾಜ್‌ ಬೊಮ್ಮಾಯಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌,  ಯುವ ಸಬಲೀಕರಣ ಮತ್ತು ಕ್ರೀಡಾ ರಾಜ್ಯ ಸಚಿವರ ನಿಶಿತ್‌ ಪ್ರಮಾಣಿಕ್‌ ಅವರು ಸಮಾಪನಾ ಸಮಾರಂಭಕ್ಕೆ ಮೆರಗು ತಂದರು. 

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತ ಪುರಷರ ಮತ್ತು ಮಹಿಳಾ ಹಾಕಿ ತಂಡವನ್ನು ಈ ಸಂದರ್ಭಧಲ್ಲಿ ಗೌರವಿಸಿರುವುದು ಕಾರ್ಯಕ್ರಮದ ವಿಶೇಷ ಅಕರ್ಷಣೆಯಾಗಿತ್ತು. ಇದು ನಾಳೆಯ ಚಾಂಪಿಯನ್ನರಿಗೆ ಸ್ಫೂರ್ತಿ ಉಂಟುಮಾಡುವ ಕ್ಷಣವಾಗಿತ್ತು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಎರಡೂ ತಂಡಗಳ ಆಟಗಾರರನ್ನು ಈ ಸಂದರ್ಭದಲ್ಲಿ ಗೌರವಿಸಿದರು. ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್‌ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.

ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಒಕ್ಕೂಟ ಸಿದ್ಧಪಡಿಸಿದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ʼʼಕಾಫಿ ಟೇಬಲ್‌ ಬುಕ್‌ʼʼ ಬಿಡುಗಡೆ ಮಾಡಿ, ದೇಶದ ಯುವ ಶಕ್ತಿಯನ್ನು ಕೊಂಡಾಡಿದ  ಗೃಹ ಸಚಿವರಾದ ಅಮಿತ್‌ ಶಾ ಅವರು, “ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ 2021ರಲ್ಲಿ ಪಾಲ್ಗೊಂಡ ಎಲ್ಲ ವಿಶ್ವವಿದ್ಯಾನಿಲಯಗಳು ಹಾಗೂ ಕ್ರೀಡಾಪಟುಗಳಿಗೂ ಅಭಿನಂದನೆಗಳು. ಪಾಲ್ಗೊಂಡ ಪ್ರತಿಯೊಬ್ಬ ಕ್ರೀಡಾಪಟುವು ಕೂಡ ಪ್ರಶಂಸೆಗೆ ಅರ್ಹರು. ಸೋಲು ಮತ್ತು ಗೆಲುವು ಕ್ರೀಡೆಯ ಅವಿಭಾಜ್ಯ ಅಂಗ. ಆದರೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. 2014ರಿಂದ ಭಾರತವನ್ನು ಕ್ರೀಡೆಯೂ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ನಂ.1 ರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬದುಕನ್ನೇ ಮುಡುಪಾಗಿಟ್ಟು ಉತ್ತಮ ಯೋಜನೆಗಳನ್ನು ರೂಪಿಸಿದ್ದಾರೆ. ಅವರು ಸಮಸ್ಯೆಗಳ ಬಗ್ಗೆ ಚಿಂತಿಸದೆ, ಉತ್ತಮ ಫಲಿತಾಂಶವನ್ನು ತರುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ, ಕಠಿಣ ಪರಿಶ್ರಮ ಮಾಡುತ್ತಿದ್ದಾರೆ, ಕ್ರೀಡೆಯಲ್ಲಿ ಯಶಸ್ಸು ಕಾಣಲು ಪ್ರಧಾನಿಯವರು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅದರ ಫಲವನ್ನು ನಾವು ಕಾಣುತ್ತಿದ್ದೇವೆ,” ಎಂದರು.  

“ನಮ್ಮ ಬದುಕಿಗೆ ಕ್ರೀಡೆಯು ಅಗತ್ಯವಾಗಿ ಬೇಕಾಗಿದೆ ಎಂಬುದನ್ನು ನಾನು ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಹೇಳಬಯಸುತ್ತೇನೆ, ಕ್ರೀಡೆಯಲ್ಲಿ ತಡಗಿಕೊಂಡವರು ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಬಲ್ಲರು. ಏಕೆಂದರೆ ಕ್ರೀಡೆ ಮಾತ್ರ ಬದುಕಿನಲ್ಲಿ ಸೋಲನ್ನು ಸಹಿಸುವ ಶಕ್ತಿಯನ್ನು ಕೊಡಬಲ್ಲದು. ಆಗ ಮಾತ್ರ ನೀವು ಗೆಲ್ಲವು ಛಲವನ್ನು ಬೆಳೆಸಿಕೊಳ್ಳಲು ಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ನಮ್ಮ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಕೀರ್ತಿ ತಂದು ಗೌರವ ಹೆಚ್ಚಿಸುತ್ತಿದ್ದಾರೆ. 2047ರಲ್ಲಿ ಭಾರತವು ಸ್ವಾತಂತ್ರೋತ್ಸವದ ಶತಮಾನೋತ್ಸವವನ್ನು ಆಚರಿಸಲಿದೆ, ಇದಕ್ಕಾಗಿ ಪ್ರಧಾನಿ ಮೋದಿಯವರು ಅಭಿವೃದ್ಧಿಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ, ಭಾರತವು ಒಲಿಂಪಿಕ್ಸ್‌ನಲ್ಲಿ ಅಗ್ರ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಂತೆ ಮಾಡಲಿದ್ದಾರೆ,” ಎಂದು ಶ್ರೀ ಅಮಿತ್‌ ಶಾ ಹೇಳಿದರು.

ಪಾಲ್ಗೊಂಡ ಅಥ್ಲೀಟ್‌ಗಳು ಮತ್ತು ಆತಿಥೇಯ ಜೈನ್‌ ವಿಶ್ವವಿದ್ಯಾನಿಲಯವನ್ನು ಅಭಿನಂದಿಸುತ್ತ ಮಾತನಾಡಿದ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್‌ ಠಾಕೂರ್‌, “ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಮತ್ತು ಫಿಟ್‌ ಇಂಡಿಯಾ ಮತ್ತು ಖೇಲೋ ಇಂಡಿಯಾ ಈ ಯೋಜನೆಗಳು ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ರೂಪುಗೊಂಡವು, ಈ ವರ್ಷ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಯೂನಿವರ್ಸಿಟ ಗೇಮ್ಸ್‌ನ ಎರಡನೇ ಆವೃತ್ತಿಯನ್ನು ಬೆಂಗಳೂರಿನಲ್ಲಿ ಆಯೋಜಿಸುವ ತೀರ್ಮಾನ ಕೈಗೊಂಡಿರುವುದು ಖುಷಿಕೊಟ್ಟಿದೆ. ಕೋವಿಡ್‌ ಆತಂಕದ ನಡುವೆಯೂ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಅದ್ಭುತ ಯಶಸ್ಸು ಕಂಡಿದೆ. ಈ ವರ್ಷ ಕ್ರೀಡಾಪಟುಗಳು 2 ರಾಷ್ಟ್ರೀಯ ದಾಖಲೆ ಮತು 76 ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ, “ ಎಂದರು.

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿ,  ರಾಜ್ಯ ಸರಕಾರ ಮತ್ತು ಜೈನ್‌ ವಿಶ್ವವಿದ್ಯಾನಿಲಯದ ಶ್ರಮದ ಬಗ್ಗೆ ಮಾತನಾಡಿದ ಮಾನ್ಯ ಕರ್ನಾಟಕ ಮುಖ್ಯಮಂತ್ರಿಗಳಾದ ಬಸವರಾಜ್‌ ಬೊಮ್ಮಾಯಿ ಅವರು, “ಕ್ರೀಡಗಳು ಮಾನವನ ಬದುಕಿನ ಸಹವಾದ ಅಂಶಗಳು. ಒಬ್ಬ ವ್ಯಕ್ತಿಗೆ ಕ್ರೀಡಾಮನೋಭಾವ ಎಷ್ಟು ಪ್ರಾಮುಖ್ಯ ಎಂಬುದನ್ನು ಇದು ಕಲಿಸುತ್ತದೆ. ನೀವು ಗೆಲ್ಲುವುದಕ್ಕಾಗಿ ಆಡಬೇಕು ಹೊರತು ಸೋಲುವುದಕ್ಕಾಗಿ ಅಲ್ಲ. ನಿಮ್ಮಲ್ಲಿ ಭಯ ಇರಬಾರದು. ಸೋಲುವ ಭಯ ನಮ್ಮಲ್ಲಿ ಇರದೆ, ಗೆಲ್ಲುವ ಛಲ ಇರಬೇಕು. ಪ್ರಧಾನಿ ನರೆಂದ್ರ ಮೋದಿಯವರು ಉತ್ತಮ ಉದ್ದೇಶವನ್ನಿರಿಸಿಕೊಂಡು ಖೇಲೋ ಇಂಡಿಯಾ ಯಜನೆಯನ್ನು ತಂದಿದ್ದಾರೆ. ಕ್ರೀಡೆಗೆ ದೇಶದ ಗತಿಯನ್ನೇ ಬದಲಾಯಿಸುವ ಶಕ್ತಿ ಇದೆ, ದೇಶಕ್ಕಾಗಿ ಕೀರ್ತಿ ತರುವಂತೆ ನಾನು ಎಲ್ಲ ಯುವಕರನ್ನು ಈ ಸಂದರ್ಭದಲ್ಲಿ ಒತ್ತಾಯಿಸುವೆ“ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News