ಬೆಂಗಳೂರು: ಆ್ಯಸಿಡ್ ಸಂತ್ರಸ್ತೆ ಚೇತರಿಕೆ, ವಾರ್ಡ್‍ಗೆ ಸ್ಥಳಾಂತರ

Update: 2022-05-13 14:18 GMT

ಬೆಂಗಳೂರು, ಮೇ 13: ಆ್ಯಸಿಡ್ ದಾಳಿಗೆ ಒಳಗಾಗಿ ಹದಿನಾರು ದಿನಗಳ ಕಾಲ ಸೇಂಟ್ ಜಾನ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಚೇತರಿಸಿಕೊಂಡಿದ್ದು, ವಾರ್ಡ್‍ಗೆ ಸ್ಥಳಾಂತರಿಸಲಾಗಿದೆ.

ಚಿಕಿತ್ಸೆಗೆ ಸಂತ್ರಸ್ತೆ ಯುವತಿ ಸೂಕ್ತವಾಗಿ ಸ್ಪಂದಿಸಿದ್ದರಿಂದ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ. ಶೇ.10ರಷ್ಟು ಮಾತ್ರ ಚರ್ಮ ಜೋಡಣೆಯ ಆಪರೇಷನ್ ಬಾಕಿಯಿರುವುದಾಗಿ ವೈದ್ಯರು ತಿಳಿಸಿದ್ದಾರೆಂದು ಯುವತಿ ಪೋಷಕರು ತಿಳಿಸಿದ್ದಾರೆ.

ಕುಟುಂಬಸ್ಥರೊಂದಿಗೆ ಯುವತಿ ಮಾತನಾಡುತ್ತಿದ್ದು, ಮೃದು ಆಹಾರ ಸೇವಿಸಲು ವೈದ್ಯರು ಹೇಳಿದ್ದಾರೆ. ಐಸಿಯುನಿಂದ ಗುರುವಾರ ಸ್ಪೆಷಲ್ ಬನಿರ್ಂಗ್ ವಾರ್ಡ್‍ಗೆ ಸ್ಥಳಾಂತರ ಮಾಡಿ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆಂದು ಯುವತಿ ಪೋಷಕರು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News