ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಆರೋಪಿ ನಾಗೇಶ್‍ನಿಂದ ಸಾಕ್ಷ್ಯ ಕಲೆ..!

Update: 2022-05-15 15:55 GMT

ಬೆಂಗಳೂರು, ಮೇ 15: ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಆರೋಪಿ ನಾಗೇಶ್ ಬಾಬುನಿಂದ ತನಿಖಾಧಿಕಾರಿಗಳು ಕೃತ್ಯಕ್ಕೆ ಬಳಕೆ ಮಾಡಿದ ವಸ್ತುಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದು, ಆ್ಯಸಿಡ್ ದಾಳಿ ವೇಳೆ ಆರೋಪಿ ಬಳಸಿದ ವಸ್ತುಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. 

ಇನ್ನೂ, ಆರೋಪಿ ದಾಳಿಗೆ ಬಳಸಲಾಗಿದ್ದ ಆ್ಯಸಿಡ್ ಬಾಟಲ್ ಮೇಲಿದ್ದ ಬೆರಳಚ್ಚು ಸಿಗದಂತೆ ಆರೋಪಿ ಗ್ಲೌಸ್ ಹಾಕಿಕೊಂಡಿದ್ದನು. ಘಟನಾ ಸ್ಥಳದಲ್ಲಿ ಸಿಕ್ಕ ಬಾಟಲ್, ಗ್ಲೌಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. 

ಗ್ಲೌಸ್‍ನ ಒಳ ಭಾಗದಲ್ಲಿರುವ ಆರೋಪಿಯ ಬೆರಳಚ್ಚು ಕಲೆ ಹಾಕಲು ಮುಂದಾಗಿದ್ದಾರೆ.ಇದಲ್ಲದೇ ಆರೋಪಿ ಕೃತ್ಯದ ಸಂದರ್ಭದಲ್ಲಿ ಮೊಬೈಲ್ ಜೊತೆಯಲ್ಲಿ ಇಟ್ಟುಕೊಂಡಿದ್ದರಿಂದ ಟವರ್ ಲೊಕೇಷನ್ ಮತ್ತು ಸಿಸಿಟಿವಿ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News