ಥಾಮಸ್ ಕಪ್ ಗೆದ್ದ ಭಾರತ: ಸಿಎಂ ಬಸವರಾಜ ಬೊಮ್ಮಾಯಿ ಅಭಿನಂದನೆ

Update: 2022-05-16 06:13 GMT

ಬೆಂಗಳೂರು, ಮೇ 16: ಥಾಮಸ್ ಕಪ್ - 2022  ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಬಾರಿ ಚಿನ್ನ ಗೆದ್ದ ಭಾರತ ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇಡೀ ದೇಶವೇ ಈ ಗೆಲುವಿನ ಅಲೆಯಲ್ಲಿ ಸಂಭ್ರಮಿಸುತ್ತಿದೆ. ನಿಮ್ಮ ಅಪ್ರತಿಮ ಆಟ ಹಾಗೂ ಛಲ ಶ್ಲಾಘನೀಯ. ದೇಶದ ಯುವಜನತೆ ಹಾಗೂ ಕ್ರೀಡಾ ಪಟುಗಳಿಗೆ ಸ್ಪೂರ್ತಿ ತುಂಬುವಲ್ಲಿ ಈ ಗೆಲುವು ಮಹತ್ವದ್ದಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News