ಬೆಂಗಳೂರಿನಲ್ಲಿ ಮಳೆ: ನಗರದ ಹಲವೆಡೆ ಟ್ರಾಫಿಕ್ ಜಾಮ್

Update: 2022-05-16 17:38 GMT

ಬೆಂಗಳೂರು, ಮೇ 16: ಬೆಂಗಳೂರು ನಗರದಲ್ಲಿ ದಿನ ಬಿಟ್ಟು ದಿನ ಮಳೆಯಾಗುತ್ತಿದೆ. ಸೋಮವಾರ ಮಧ್ಯಾಹ್ನದ ಬಳಿಕ ಮಳೆ ಸುರಿದಿದ್ದು, ಹಲವೆಡೆ ಟ್ರಾಫಿಕ್ ಜಾಮ್‍ವುಂಟಾಗಿ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಚಂಡಮಾರುತದ ಪರಿಣಾಮದಿಂದ ನಗರದಲ್ಲಿ ದಿನ ಬಿಟ್ಟು ದಿನ ಮಳೆಯಾಗುತ್ತಿದೆ. ಸೋಮವಾರ ವಾಹನ ನೆನೆದುಕೊಂಡೇ ವಾಹನ ಚಲಾಯಿಸಿದರು. ಹಲವರು ಅನಿವಾರ್ಯವಾಗಿ ಆಟೋಗಳನ್ನು ಅವಲಂಬಿಸಬೇಕಾಯಿತು. 

ಲಕ್ಕಸಂದ್ರ, ಕೆಂಗೇರಿ, ಗುಟ್ಟಹಳ್ಳಿ, ಆರ್.ಆರ್.ನಗರ, ಪುಲಿಕೇಶಿನಗರ, ಕೋರಮಂಗಲ, ಬಸವನಗುಡಿ, ತಾವರಕೆರೆ, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಶಿವಾನಂದ ವೃತ್ತ, ಗಾಂಧಿನಗರ, ಜಯನಗರ, ಚಾಮರಾಜಪೇಟೆ, ಯಶವಂತಪುರ, ಜೆಪಿ ನಗರ ಸೇರಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಮಳೆಯಾಗಿದ್ದು, ಟ್ರಾಫಿಕ್ ಜಾಮ್ ಸಹ ಉಂಟಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News