ಅಪಘಾತ ಪ್ರಕರಣ; ಕಾರ್ಕಳದಲ್ಲಿ ತೀವ್ರಗೊಂಡ ವಾಹನ ತಪಾಸಣೆ

Update: 2022-05-17 09:28 GMT

ಕಾರ್ಕಳ : ತಾಲೂಕಿನಲ್ಲಿ ಇತ್ತೀಚೆಗೆ ರಸ್ತೆ ಅಪಘಾತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಕಾರ್ಕಳ ನಗರ ಠಾಣೆ ಪೊಲೀಸರು ಕಾರ್ಕಳ ವಿವಿಧ ಕಡೆಗಳಲ್ಲಿ ವಾಹನಗಳ ತಪಾಸಣೆ, ದಾಖಲೆ ಪರಿಶೀಲನೆ ನಡೆಸಿದರು. 

ಕಾರ್ಕಳ ನಗರ ಪೊಲೀಸ್‌ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್.‌, ಎಎಸ್‌ಐ ಗಳಾದ ರಾಜೇಶ್‌, ಯಶವಂತ್‌, ದಿನಕರ್‌, ಪಿ ಸಿ ಗಿರೀಶ್‌, ಯತೀಶ್‌ ಅವರು ವಾಹನ ಚಾಲಕರು, ದ್ವಿಚಕ್ರ ಸವಾರನ್ನು ನಿಲ್ಲಿಸಿ ದಾಖಲೆ ಪರಿಶೀಲಿಸಿ, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವ ಹಾಗೂ ಸೀಟ್ ಬೆಲ್ಟ್ ಧರಿಸದ ಚಾಲಕರಿಗೆ ಸ್ಥಳದಲ್ಲೇ ಜುಲ್ಮಾನೆ ಭರಿಸಿಕೊಂಡು ದಾಖಲೆಗಳಿಲ್ಲದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುವ ಜೊತೆಗೆ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News