ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ: ಹನಿಟ್ರ್ಯಾಪ್ ಆರೋಪಿಗಳಿಗೆ ಕೋರ್ಟ್ನಿಂದ ಜಾಮೀನು
Update: 2022-05-27 17:25 GMT
ಬೆಂಗಳೂರು, ಮೇ 27: ಬಿಜೆಪಿ ಮುಖಂಡ ಅನಂತರಾಜ್ ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧಿತ ಆರೋಪಿ ರೇಖಾ ಎಂಬಾಕೆಗೆ ನಗರದ ಸಿಟಿ ಸಿವಿಲ್ ಕೋರ್ಟ್ ಜಾಮೀನು ನೀಡಿದೆ.
ಇದೇ ವೇಳೆ ಮತ್ತಿಬ್ಬರಿಗೂ ನಿರೀಕ್ಷಣಾ ಜಾಮೀನು ನೀಡಿದೆ. ಮೇ 12ರಂದು ಅನಂತರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದರು. ತನ್ನ ಪತಿಗೆ ಕೆ.ಆರ್.ಪುರದ ರೇಖಾ, ಈಕೆ ಪತಿ ವಿನೋದ್ ಮತ್ತು ಸ್ನೇಹಿತೆ ಸ್ಪಂದನಾ ಕಿರುಕುಳ ನೀಡುತ್ತಿದ್ದರು.
ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಸುಮಾ ದೂರು ನೀಡಿದ್ದರು. ಇದರ ಆಧಾರದ ಮೇಲೆ ರೇಖಾರನ್ನು ಪೊಲೀಸರು ಬಂಧಿಸಿದ್ದರು.