ಮಾದಕ ವಸ್ತು ಖರೀದಿ ಪ್ರಕರಣ: ನ್ಯಾಯಾಂಗ ಬಂಧನಕ್ಕೆ ಆದಿಕೇಶವುಲು ಪುತ್ರ

Update: 2022-05-27 18:21 GMT

ಬೆಂಗಳೂರು, ಮೇ 27: ಮಾದಕ ವಸ್ತು ವ್ಯಸನ ಪ್ರಕರಣದಲ್ಲಿ ದಿವಂಗತ ಆದಿಕೇಶವಲು ಮಗ ಶ್ರೀನಿವಾಸ್ ಬಂಧಿಸಿದ್ದ ಎನ್‍ಸಿಬಿ ಅಧಿಕಾರಿಗಳು ವಿಚಾರಣೆ ಮುಕ್ತಾಯ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚಿಗೆ ಹೈದರಾಬಾದ್‍ನಿಂದ ಏರ್ ಪೋರ್ಟ್ ಬಳಿ ಬರುವಾಗ ಡ್ರಗ್ಸ್ ಸರಬರಾಜು ಮಾಡಿಕೊಂಡ ಆರೋಪದಡಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಶ್ರೀನಿವಾಸ್‍ನನ್ನು ಬಂಧಿಸಲಾಗಿತ್ತು. ಇದೀಗ ವಿಚಾರಣೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು 14 ದಿನಗಳ ಕಾಲ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ಹೈದರಾಬಾದ್‍ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಶ್ರೀನಿವಾಸ್ ಸಾದಹಳ್ಳಿ ಗೇಟ್‍ನ ಬಳಿ ಕಾರಿನಲ್ಲಿ ಬರುವಾಗ ಟಿವಿಎಸ್ ಸ್ಕೂಟರ್‍ನಲ್ಲಿ ಬಂದಿದ್ದ ಗಿರೀಶ್ ಎಂಬಾತ ಶ್ರೀನಿವಾಸ್‍ಗೆ ಒಂದು ಗ್ರಾಂ ಕೊಕೈನ್ ತಂದುಕೊಟ್ಟಿದ್ದ. ಡ್ರಗ್ಸ್ ಪಾಕೇಟ್ ನೀಡುತ್ತಿದ್ದಂತೆ ಸುತ್ತುವರೆದ ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News