ಪತ್ರಕರ್ತ ದಿ. ಯಶವಂತ ಐಕಳರ ನೆನಪು ಕಾರ್ಯಕ್ರಮ

Update: 2022-06-03 06:37 GMT

ಕಿನ್ನಿಗೋಳಿ : ಮುಲ್ಕಿ ವಲಯ ಪತ್ರಕರ್ತರ ಸಂಘ, ಕನ್ನಡ ವಿಭಾಗ ಮತ್ತು ಮಾನವಿಕ ಸಂಘ ಪೊಂಪೈ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ "ಪತ್ರಕರ್ತ ದಿ. ಯಶವಂತ ಐಕಳರ ನೆನಪು" ಕಾರ್ಯಕ್ರಮ ಗುರುವಾರ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು‌.

ಈ ವೇಳೆ ಮಾತನಾಡಿದ ಪ್ರಾಂಶುಪಾಲರು, ಯಶವಂತ ಐಕಳ ಅವರು ಪತ್ರಕರ್ತರಾಗಿದ್ದರೂ ಸ್ಥಳೀಯವಾಗಿ ಎಲ್ಲಾ ಶಾಲೆ ಕಾಲೇಜುಗಳ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು. ಶೈಕ್ಷಣಿಕ ಕ್ಷೇತ್ರಕ್ಕೆ ಅವರು ತನ್ನ ವರದಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದರು ಎಂದು ನುಡಿದರು.

ಇದೇ ಸಂದರ್ಭ ದಿ. ಯಶವಂತ ಐಕಳ ಅವರ ಭಾವಚಿತ್ರಕ್ಕೆ ಅವರ ಪತ್ನಿ, ಕುಟುಂಬಸ್ಥರು, ಅಥಿತಿಗಳು ಪುಷ್ಪನಮನ ಸಲ್ಲಿಸುವ ಮೂಲಕ ಶ್ರಂದ್ದಾಂಜಲಿ‌ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್  ನಾಯಕ್ ಇಂದಾಜೆ ವಹಿಸಿದ್ದರು.

ಈ ಸಂದರ್ಭ ಪೊಂಪೈ ಕಾಲೇಜಿನ ಪ್ರಾಚಾರ್ಯರಾದ ಡಾ. ಪುಶೋತ್ತಮ ಕೆ.ವಿ., ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ನೇಮಿಚಂದ್ರ, ಮಾನವಿಕ ಸಂಘದ ನಿರ್ದೇಶಕಿ ಆಶಿತಾ ಜೆ., ಮುಲ್ಕಿ ವಲಯ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಶೆಟ್ಟಿ ಕಿಲೆಂಜೂರು, ಕಾಲೇಜು ಆಡಳಿತ ಸಮಿಯ ಮುಖ್ಯಸ್ಥರು, ಅಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಪತ್ರಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News