ಅಬ್ದುಲ್ ಖಾದರ್ ಮುಸ್ಲಿಯಾರ್‌ಗೆ ಬೀಳ್ಕೊಡುಗೆ

Update: 2022-06-03 11:39 GMT

ಮಂಜನಾಡಿ : ತನ್ನ ಪತ್ನಿ ಸಮೇತ ಪವಿತ್ರ ಹಜ್ ಯಾತ್ರೆಕೈಗೊಳ್ಳಲಿರುವ ಎಸ್‌ವೈಎಸ್ ಮಂಜನಾಡಿ ಸೆಂಟರ್‌ನ ಸಕ್ರಿಯ ಕಾರ್ಯರ್ತ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಡಸಾಲೆ  ಅವರನ್ನು ಸೆಂಟರ್ ವತಿಯಿಂದ ಬೀಳ್ಕೊಡಲಾಯಿತು.

ಮಂಜನಾಡಿ ಸೆಂಟರಿನ ಉಪಾಧ್ಯಕ್ಷ ಅಬ್ದುರ‌್ರಹ್ಮಾನ್ ಮದನಿ, ಮುಹಮ್ಮದ್ ಹಾಜಿ ಜೀಲಾನಿ, ಸಂಘಟನಾ ಕಾರ್ಯದರ್ಶಿ ಮೋನು ಕಲ್ಲಟ್ಡ, ದಅವಾ ಕಾರ್ಯದರ್ಶಿ ಖಾಸಿಂ ಲತೀಫಿ, ಸಾಂತ್ವನ ಕಾರ್ಯದರ್ಶಿ ಬಾವುಚ್ವ ಅನ್ಸಾರ್‌ನಗರ, ಸೋಶಿಯಲ್ ಕಾರ್ಯದರ್ಶಿ ಹುಸೇನ್ ಕುಂಞಿ ಕಟ್ಟೆಮಾರ್, ಖಾಲಿದ್ ಮದನಿ ಕಲ್ಮಿಂಜ, ಅಬ್ಬಾಸ್ ಸಖಾಫಿ, ಎನ್.ಐ. ಮುಹಮ್ಮದ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಕೆಎಂಕೆ.ಮಂಜನಾಡಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News