ಜೂ. 6 ರಂದು ಎಸ್ಸಿ ನಕಲಿ ಪ್ರಮಾಣಪತ್ರದ ವಿರುದ್ಧ ಪ್ರತಿಭಟನೆ
Update: 2022-06-05 18:38 IST
ಉಡುಪಿ, ಜೂ.೫: ಮೀನುಗಾರರಿಗೆ ಪರಿಶಿಷ್ಟ ಜಾತಿಯ ನಕಲಿ ಮೊಗೇರ ಪ್ರಮಾಣಪತ್ರ ನೀಡುವುದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಹಾಗೂ ಮುಗ್ಗೇರ ಸಂಘಟನೆ ಉಡುಪಿ ಜಿಲ್ಲಾ ಸಮಿತಿಗಳ ಜಂಟಿ ಆಶ್ರಯದಲ್ಲಿ ಪ್ರತಿಭಟನಾ ಜಾಥ ಹಾಗೂ ಬಹಿರಂಗ ಸಭೆಯನ್ನು ಜೂ.೬ ರಂದು ಬೆಳಗ್ಗೆ ೧೦.೩೦ಕ್ಕೆ ಉಡುಪಿ ತಾಲೂಕು ಕಚೇರಿ ಎದುರು ಹಮ್ಮಿಕೊಳ್ಳ ಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.