ದೇಶದಲ್ಲಿ ಅಂತರ್ಯುದ್ಧ ಭೀತಿ : ಬಿಜೆಪಿ ವಿರುದ್ಧ ಲಾಲೂ ಪ್ರಸಾದ್ ಯಾದವ್ ವಾಗ್ದಾಳಿ

Update: 2022-06-06 02:54 GMT
ಲಾಲೂ ಪ್ರಸಾದ್ ಯಾದವ್

ಪಾಟ್ನಾ: ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‍ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, "ದೇಶ ಅಂತರ್ಯುದ್ಧದತ್ತ ಸಾಗಿದೆ" ಎಂದು ಹೇಳಿದ್ದಾರೆ.

ಜನತೆ ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧದ ಹೋರಟಕ್ಕೆ ಒಗ್ಗಟ್ಟಾಗಬೇಕು ಎಂದು ಅವರು ಕರೆ ನೀಡಿದ್ದಾರೆ.

"ಬಿಜೆಪಿಯ ಕಾರ್ಯವಿಧಾನದಿಂದಾಗಿ ದೇಶ ಅಂತರ್ಯುದ್ಧದತ್ತ ಸಾಗುತ್ತಿದೆ. ದೇಶದಲ್ಲಿ ಹಣದುಬ್ಬರ, ನಿರುದ್ಯೋಗ ಮತ್ತು ಭ್ರಷ್ಟಾಚಾರ ವಿರುದ್ಧ ಜನ ಒಗ್ಗಟ್ಟಾಗಬೇಕು ಎಂದು ಕರೆ ನೀಡುತ್ತಿದ್ದೇನೆ. ನಾವು ಸಂಘಟಿತ ಹೋರಾಟ ನಡೆಸಿ, ಗೆಲ್ಲಬೇಕು" ಎಂದು ಸಂಪೂರ್ಣ ಕೀರ್ತಿ ದಿವಸ ಸಂದರ್ಭದಲ್ಲಿ ಆಯೋಜಿಸಿದ್ದ ವರ್ಚುವಲ್ ರ‍್ಯಾಲಿಯಲ್ಲಿ ಲಾಲೂ ಕರೆ ನೀಡಿದರು.

ಜಾತ್ಯತೀತ ಶಕ್ತಿಗಳು ಸಂಘಟಿತವಾಗಿ ಹೋರಾಟಬೇಕು. ನಾವು ಹಿಂದೆ ಸರಿಯಬಾರದು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News