ಕೆಎಸ್ಸಾರ್ಟಿಸಿ ನಿಗಮದ ಘಟಕಗಳಲ್ಲಿ ಉಪಕ್ರಮ ಅಳವಡಿಸಿಕೊಂಡವರಿಗೆ ಪ್ರೋತ್ಸಾಹ

Update: 2022-06-09 16:31 GMT

ಬೆಂಗಳೂರು, ಜೂ.9: ಕೆಎಸ್ಸಾರ್ಟಿಸಿಯ ಘಟಕಗಳಲ್ಲಿ ಹಾಗೂ ವಿಭಾಗಗಳಲ್ಲಿ ಹೊಸ ಉಪಕ್ರಮಗಳನ್ನು ಅಳವಡಿಕೊಂಡಿರುವ ಸಿಬ್ಬಂದಿಗಳಿಗೆ ಪ್ರೋತ್ಸಾಹಿಸಲು ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಪಟ್ಟಿಯನ್ನು ಕಳುಹಿಸುವಂತೆ ನಿಗಮದ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ.

ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದು, ವಾಹನ ದುರಸ್ತಿ, ಟೈರ್-ಟ್ಯೂಬ್ ಬಳಕೆ, ಇಂಧನ ಉಳಿತಾಯ, ನೀರಿನ ಕ್ಷಮತೆ ಹೆಚ್ಚಿಸುವುದು, ಸಿಬ್ಬಂದಿಗಳ ಹಾಜರಾತಿಯಲ್ಲಿ ಪ್ರಗತಿ, ಆರ್ಥಿಕ ಉಳಿತಾಯದಂತಹ ಸಾಧನ ಮಾಡಿದವರು ಈ ಪ್ರೋತ್ಸಾಹಕ್ಕೆ ಅರ್ಹರಾಗಿರುತ್ತಾರೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ಕೇಂದ್ರ ಕಚೇರಿ ಮಟ್ಟದಲ್ಲಿ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News