ವಿಡಿಯೋ ನೋಡಿ- ಪಠ್ಯ ಪರಿಷ್ಕರಣೆ ವಿರುದ್ಧ ಶನಿವಾರದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಕರೆ

Update: 2022-06-17 17:52 GMT

ಬೆಂಗಳೂರು:  ಪಠ್ಯಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಈ ನೆಲದ ಮಹಾಪುರುಷರು, ದಾರ್ಶನಿಕರು ಮತ್ತು ಸಾಹಿತಿಗಳನ್ನು ಅವಮಾನಿಸಿ, ಅವರ ಕೃತಿಗಳನ್ನು ತಿರುಚಿದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಜೂನ್ 18ರಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯದ ಪ್ರಜ್ಞಾವಂತ ಜನರೆಲ್ಲರೂ ಭಾಗವಹಿಸಿ, ಬೆಂಬಲಿಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು,  'ನಾನು ಪ್ರತಿನಿಧಿಸುತ್ತಿರುವ ಬಾದಾಮಿ ಕ್ಷೇತ್ರದಲ್ಲಿ ಪೂರ್ವನಿರ್ಧರಿತ ಕಾರ್ಯಕ್ರಮವಿರುವ ಕಾರಣದಿಂದಾಗಿ ಜೂನ್ 18ರ ಪ್ರತಿಭಟನಾ ಕಾರ್ಯಕ್ರಮದಲ್ಲಿ ನನಗೆ ಭಾಗವಹಿಸಲಾಗುತ್ತಿಲ್ಲ. ಈ ಪ್ರತಿರೋಧ ಇಲ್ಲಿಗೆ ನಿಲ್ಲಬಾರದು, ತಾರ್ಕಿಕ ಅಂತ್ಯ ಕಾಣುವ ವರೆಗೆ ಮುಂದುವರಿಯಬೇಕು' ಎಂದು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News