ಪ್ರತ್ಯೇಕ ಪ್ರಕರಣ: ಮೂವರು ನಾಪತ್ತೆ

Update: 2022-07-26 05:29 GMT

ಕೋಟ : ಶಿರಿಯಾರದ ನಿವಾಸಿ ಜಯಶೀಲ ಶೆಟ್ಟಿ(೩೬) ಎಂಬವರು ಜೂ.೧೯ರಂದು ಬಾರ್ಕೂರಿನಲ್ಲಿರುವ ಅಕ್ಕನ ಮನೆಗೆ ಹೋಗುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆ: ಕೊಪ್ಪಳದಿಂದ ಕಲ್ಮಾಡಿಯಲ್ಲಿರುವ ಮಗಳ ಮನೆಗೆ ಬಂದಿದ್ದ ಕಲ್ಲಪ್ಪ (೪೫) ಎಂಬವರು ಜೂ.೧೧ರಂದು ರಾತ್ರಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು: ಅನಾರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ನೊಂದಿದ್ದ ಅರೆಶಿರೂರು ಗ್ರಾಮದ ದ್ಯಾಸಮಕ್ಕಿ ನಿವಾಸಿ ನರಸಿಂಹ ಮರಾಠಿ ಎಂಬವರ ಪತ್ನಿ ಭಾರತಿ ಮರಾಠಿ(೪೦) ಎಂಬವರು ಜೂ.೧೯ರಂದು ಮಧ್ಯಾಹ್ನ  ಮನೆ ಯಿಂದ ಹೊದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News