×
Ad

ಕೊಣಾಜೆ: ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತ್ಯು

Update: 2022-06-24 21:45 IST

ಕೊಣಾಜೆ: ದೇರಳಕಟ್ಟೆ ಜಲಾಲ್ ಬಾಗ್ ಬಳಿ ಯುವಕನೋರ್ವ ಮನೆ ಸಮೀಪದ ಮಾವಿನ ಮರದಿಂದ ಹಣ್ಣು ಕೀಳುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ‌ ಸಂಜೆ ಸಂಭವಿಸಿದೆ.

ಮೃತ‌ರನ್ನು ಹರೇಕಳ ಉಲ್ಲಾಸ್ ನಗರದ ಮಹಮ್ಮದ್ ಎಂಬವರ ಪುತ್ರ ಇಲ್ಯಾಸ್ (30) ಎಂದು ಗುರುತಿಸಲಾಗಿದೆ.

ಮೂಲತಃ ಹರೇಕಳದವರಾದ ಇವರ ಕುಟುಂಬ ಕಳೆದ‌ ಕೆಲವು ವರ್ಷಗಳ ಹಿಂದೆ ದೇರಳಕಟ್ಟೆಯ ಜಲಾಲ್ ಬಾಗ್ ಗೆ ಬಂದು ವಾಸವಾಗಿದ್ದರು. ಶುಕ್ರವಾರ ಸಂಜೆ ಮನೆ ಸಮೀಪದ ಮಾವಿನ ಮರದಿಂದ ಮಾವಿನ ಹಣ್ಣು ಕೊಯ್ಯಲು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News