ಸಂಪ್ಯದಲ್ಲಿ ಸಮಸ್ತ ಸ್ಥಾಪಕ ದಿನಾಚರಣೆ
Update: 2022-06-26 16:04 GMT
ಪುತ್ತೂರು: ಸಮಸ್ತ ಸ್ಥಾಪಕ ದಿನದ ಅಂಗವಾಗಿ ಭಾನುವಾರ ಸಂಪ್ಯ ಮಸೀದಿಯ ವಠಾರದಲ್ಲಿ ಇಲ್ಲಿನ ದಾರೂಲ್ ಉಲೂಮ್ ಮದ್ರಸ ವತಿಯಿಂದ ಸಮಸ್ತ ಸ್ಥಾಪಕ ದಿನಾಚರಣೆ ಆಚರಿಸಲಾಯಿತು.
ಜಮಾತ್ ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ ಧ್ವಜಾರೋಹಣ ನೆರವೇರಿಸಿದರು. ಖತೀಬ್ ಅಬ್ದುಲ್ ಹಮೀದ್ ದಾರಿಮಿ ಸಂದೇಶ ಭಾಷಣ ಮಾಡಿದರು, ಅಬ್ದುಲ್ ಅಝೀಝ್ ಮುಸ್ಲಿಯಾರ್ ಉದ್ಘಾಟಿಸಿದರು. ಅಧ್ಯಾಪಕರಾದ ಅಶ್ರಫ್ ಮುಸ್ಲಿಯಾರ್, ಹಮೀದ್ ದಾರಿಮಿ ಮಾತನಾಡಿದರು.
ಈ ಸಂದರ್ಭ ಕೇಂದ್ರ ಕುತ್ವಾಬ ಸಮಿತಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬ್ದುಲ್ ಹಮೀದ್ ದಾರಿಮಿ ಮದರಸಾ ಮೇನೇಜ್ಮೆಂಟ್ ಹಾಗೂ ಎಸ್'ಕೆಎಸ್'ಬಿವಿ ವತಿಯಿಂದ ಸನ್ಮಾನಿಸಲಾಯಿತು ವೇದಿಕೆಯಲ್ಲಿ ಮೆನೇಜ್ಮೆಂಟ್ ಸದಸ್ಯರುಗಳಾದ ಅಬೂಬಕರ್, ನಿಸಾರ್, ಇಸ್ಮಾಯಿಲ್, ಅಬೂಕ್ಕರ್ ಕಲ್ಲಾರ್ಫೆ, ಜಮಾತ್ ಕಮಿಟಿ ಸದಸ್ಯ ಅಝೀಝ್ ಸಂಪ್ಯ ಎಸ್'ಕೆ ಎಸ್'ಎಸ್'ಎಫ್ ಸಂಪ್ಯ ಶಾಖೆಯ ಅಧ್ಯಕ್ಷ ಹಬೀಬ್ ಕೆಂಪಿ , ಕಾರ್ಯದರ್ಶಿ ಮುನೀರ್ ಕೋಶಾಧಿಕಾರಿ ಫಾರೂಕ್ ಅಮ್ಮುಂಜ ಮತ್ತಿತರರು ಉಪಸ್ಥಿತರಿದ್ದರು.