ಮಿತ್ತೂರು ಸಿರಾಜುಲ್ ಹುದಾ ಮದ್ರಸ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಸಿರಾಜುದ್ದೀನ್ ಆಯ್ಕೆ

Update: 2022-06-28 05:17 GMT
ಕೆ.ಬಿ.ಸಿರಾಜುದ್ದೀನ್, ಮುಹಮ್ಮದ್ ಹಾರಿಸ್ ಕೌಸರಿ

ವಿಟ್ಲ, ಜೂ.28: ಮಿತ್ತೂರು ಸಿರಾಜುಲ್ ಹುದಾ ಮದ್ರಸದ ಶಿಕ್ಷಕ ರಕ್ಷಕ ಸಂಘದ ನೂತನ ಸಮಿತಿಯ ಅಧ್ಯಕ್ಷರಾಗಿ ಕೆ.ಬಿ.ಸಿರಾಜುದ್ದೀನ್ ಆಯ್ಕೆಯಾಗಿದ್ದಾರೆ.

2022-23ನೇ ಶೈಕ್ಷಣಿಕ ವರ್ಷದ ಪ್ರಥಮ ಪೋಷಕರ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹಾರಿಸ್ ಕೌಸರಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಂ.ಎಂ.ಆದಂ, ಕೆ.ಬಿ.ಹಮೀದ್, ಹಂಝ ಕಂದಕ್, ಎಸ್.ಎ.ಹಂಝ, ಜಾಬಿರ್, ಸಿದ್ದೀಕ್, ಹಬೀಬ್, ಕೆ.ಬಿ.ಸಲೀಂ, ಇಕ್ಬಾಲ್, ಫಾರೂಕ್ ಹಾಗೂ ಸಲೀಂ ಮೊದಲಾದವರು ನೇಮಕಗೊಂಡರು.

ಎಂ.ಎಂ.ಎಸ್.ಆದಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸ್ಥಳೀಯ ಖತೀಬ್ ಅಬ್ದುಲ್ ಮಜೀದ್ ದಾರಿಮಿ ಉದ್ಘಾಟಿಸಿದರು.

ಅಧ್ಯಾಪಕ ಮುಹಮ್ಮದ್ ಹಾರಿಸ್ ಕೌಸರಿ ಮಕ್ಕಳ ಬೆಳವಣಿಗೆ ಮತ್ತು ವಿದ್ಯಾಭ್ಯಾಸದ ಕುರಿತು ವಿಷಯ ಮಂಡಿಸಿದರು. ಇಬ್ರಾಹೀಂ ದಾರಿಮಿ ಸ್ವಾಗತಿಸಿದರು. ರಮ್ಲಾನ್ ಅಝ್ಹರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News