ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ‘ಈದುಲ್ ಅಝ್‌ಹಾ’ ಆಚರಣೆ

Update: 2022-07-10 11:22 GMT

ಉಳ್ಳಾಲ : ಕೇಂದ್ರ ಜುಮಾ ಮಸೀದಿಯಲ್ಲಿ ಈದುಲ್ ಅಝ್‌ಹಾ ನಮಾಝ್ ಹಾಗೂ ಖುತುಬಾ ಪಾರಾಯಣ ನಡೆಯಿತು.

ಅನ್ವರ್ ಅಲಿ ದಾರಿಮಿ ನೇತೃತ್ವ ವಹಿಸಿ ದುಆ ಹಾಗೂ ಖುತುಬಾ ಪಾರಾಯಣ ನಡೆಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅವರು ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಪ್ರವಾದಿ ಇಬ್ರಾಹಿಂ ಅವರ ಹಜ್ಜ್ ಹಾಗೂ ಬಲಿದಾನ ನೀಡಿದ್ದನ್ನು ನೆನಪಿಸುತ್ತದೆ. ಈ ವೇಳೆ ನಾವು  ಸೌಹಾರ್ದತೆ ಯೊಂದಿಗೆ ಆಚರಿಸಿ ಸಂತೋಷ ಹಂಚಿಕೊಳ್ಳಬೇಕು. ಬಲಿದಾನವನ್ನು ಯಾವುದೇ ಗದ್ದಲ ಇಲ್ಲದೇ ಸಾರ್ವಜನಿಕರಿಗೆ ತೊಂದರೆ ಕೊಡದೇ ನಡೆಸುವ ಮೂಲಕ ಸಮಾಜಕ್ಕೆ ಮಾದರಿ ಆಗಬೇಕು  ಎಂದು ಸಂದೇಶ ನೀಡಿದರು.

ಈ ವೇಳೆ ದರ್ಗಾ ಸಮಿತಿ ಸದಸ್ಯ ಫಾರೂಕ್ ಉಳ್ಳಾಲ್, ಲತೀಫ್ ಚೆರ್ಮೋನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News