ನ.26, 27ರಂದು ಎಸ್.ಜೆ.ಎಂ. ರಾಜ್ಯ ಮಟ್ಟದ ಪ್ರತಿಭಾ ಸಂಗಮ: ಎ.ಪಿ.ಉಸ್ತಾದ್ ಘೋಷಣೆ

Update: 2022-07-10 15:24 GMT

ಮಂಗಳೂರು: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿ ಇದರ ಆಶ್ರಯದಲ್ಲಿ ಮದ್ರಸಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಪ್ರತಿಭಾ ಸಂಗಮವು ನವೆಂಬರ್ 26,27ರಂದು ಸುಳ್ಯ ಗಾಂಧಿನಗರದಲ್ಲಿ ನಡೆಯಲಿದೆಯೆಂದು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಮರ್ಕಝು ಸ್ಸಖಾಫತಿಸ್ಸುನ್ನಿಯ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದರು.

ಈ ವೇಳೆ ಎಸ್.ಜೆ.ಎಂ.ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಪ್ರಧಾನ ಕಾರ್ಯದರ್ಶಿ ಪುಂಡೂರು ಇಬ್ರಾಹೀಂ ಸಖಾಫಿ, ಉಪಾಧ್ಯಕ್ಷರಾದ ಕೆ.ಕೆ.ಎಂ.ಕಾಮಿಲ್ ಸಖಾಫಿ, ಹಾಫಿಳ್ ಹನೀಫ್ ಮಿಸ್ಬಾಹಿ, ಕಾರ್ಯದರ್ಶಿಗಳಾದ ಪಿ.ಎಂ.ಮುಹಮ್ಮದ್ ಮದನಿ, ಇಬ್ರಾಹೀಂ ನಈಮಿ ಮುಂತಾದ ರಾಜ್ಯ ನಾಯಕರು ಉಪಸ್ಥಿತರಿದ್ದರು. ಪ್ರತಿಭಾ ಸಂಗಮದ ಪೋಸ್ಟರನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ರಾಜ್ಯ ಮಟ್ಟದ ಪ್ರತಿಭಾ ಸಂಗಮಕ್ಕೆ ಪೂರ್ವಭಾವಿಯಾಗಿ  ಪ್ರತಿಭಾ ಸಂಗಮವು ಸೆಪ್ಟಂಬರ್ 27 ರಿಂದ ಅಕ್ಟೋಬರ್ 25 ತನಕ ಮದ್ರಸಾ ಮಟ್ಟದಲ್ಲೂ, ಅಕ್ಟೋಬರ್ 26 ರಿಂದ ನವೆಂಬರ್ 10 ತನಕ ರೇಂಜ್  ಮಟ್ಟದಲ್ಲೂ ನವೆಂಬರ್ 11 ರಿಂದ ನವೆಂಬರ್ 25 ತನಕ ಜಿಲ್ಲಾ ಮಟ್ಟಗಳಲ್ಲೂ  ನಡೆಯಲಿದೆಯೆಂದು ರಾಜ್ಯ ಸಮಿತಿ ಕಾರ್ಯದರ್ಶಿ ಬೆಟ್ಟಂಪಾಡಿ ಅಬ್ದುಲ್ ಅಝೀಝ್ ನೂರಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News