ತಲವಾರು ದಾಳಿ ವದಂತಿ ಪ್ರಕರಣ; ಬಿಜೆಪಿ ಕಾರ್ಯಕರ್ತ ಉಚ್ಚಿಲದ ಕಿಶೋರ್ ವಿರುದ್ಧ ಪ್ರಕರಣ ದಾಖಲು
Update: 2022-08-04 15:11 GMT
ಉಳ್ಳಾಲ: ಕೆ.ಸಿ.ನಗರದ ಮುಳ್ಳುಗುಡ್ಡೆ ಎಂಬಲ್ಲಿ "ದುಷ್ಕರ್ಮಿಗಳು ತನ್ನನ್ನು ಬೆನ್ನಟ್ಟಿ ತಲವಾರು ದಾಳಿಗೆ ಯತ್ನಿಸಿದ್ದಾರೆ" ಎಂದು ವದಂತಿ ಹಬ್ಬಿಸಿದ್ದ ಬಿಜೆಪಿ ಕಾರ್ಯಕರ್ತ, ಉಚ್ಚಿಲ ನಿವಾಸಿ ಕಿಶೋರ್ ಎಂಬಾತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ (107 Section) ಪ್ರಕರಣ ದಾಖಲಾಗಿದೆ.
ಬುಧವಾರ ವದಂತಿ ಹಬ್ಬಿಸಿದ ವೇಳೆ ಉಳ್ಳಾಲ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ಸಂದರ್ಭ ಅಂತಹ ಯಾವುದೇ ಘಟನೆ ನಡೆದಿಲ್ಲ, ತಾನು ಸುಮ್ಮನೆ ಹೇಳಿರುವುದಾಗಿ ತಿಳಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು. ನಂತರ ಪೊಲೀಸರು ಈ ಬಗ್ಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಆತನನ್ನು ಕೈಬಿಟ್ಟಿದ್ದರು. ಇದೀಗ ಮುಂಜಾಗೃತಾ ಕ್ರಮವಾಗಿ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.