ಕಾವು | ಸುಳ್ಯ ವೃತ್ತ ನಿರೀಕ್ಷಕರ ಕಾರು ಅಪಘಾತ: ಅಪಾಯದಿಂದ ಪಾರು

Update: 2022-08-13 09:06 GMT

ಪುತ್ತೂರು, ಆ.13: ಕಾವು ಬುಶ್ರಾ ಸ್ಕೂಲ್ ಬಳಿ ಸುಳ್ಯ ವೃತ್ತ ನಿರೀಕ್ಷಕರು ಸಂಚರಿಸುತ್ತಿದ್ದ ಕಾರು ಮತ್ತು ಓಮ್ನಿ ಕಾರೊಂದರ ನಡುವೆ ಶನಿವಾರ ಬೆಳಗ್ಗೆ ಅಪಘಾತ ಸಂಭವಿಸಿದೆ. ಎರಡು ಕಾರುಗಳಲ್ಲಿದ್ದವರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಪುತ್ತೂರು ಕಡೆಯಿಂದ ಸುಳ್ಯದತ್ತ ತೆರಳುತ್ತಿದ್ದ ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ಅವರು ಕಾರು ಮತ್ತು ಪೈಚಾರಿನಿಂದ ಮಾಡಾವಿನತ್ತ ಚಲಿಸುತ್ತಿದ್ದ ಮಾಡಾವಿನ ರಬ್ಬರ್ ಅಂಗಡಿ ಮಾಲಕ ಹನೀಫ್ ಎಂಬವರು ಓಮ್ನಿ ಕಾರು ಮಧ್ಯೆ ಈ ಅಪಘಾತ ಸಂಭವಿಸಿದೆ. ಢಿಕ್ಕಿಯಾದ ರಭಸಕ್ಕೆ ಕಾರು ಜಖಂಗೊಂಡಿದೆ. ಹನೀಫ್ ಅವರ ಕಾಲಿಗೆ ಸಣ್ಣ ಪ್ರಮಾಣದ ಗಾಯವಾಗಿದೆ.

ಸ್ಥಳಕ್ಕೆ ಸಂಪ್ಯ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ಹೊಸ ಶಿವಸೇನ ಭವನ ನಿರ್ಮಿಸಲು ಏಕನಾಥ್ ಶಿಂಧೆ ಯೋಜನೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News