ಕರಾವಳಿ ಕಾವಲು ಪೊಲೀಸರಿಂದ ಸ್ವಚ್ಛತಾ ಕಾರ್ಯಕ್ರಮ

Update: 2022-08-15 15:09 GMT

ಮಲ್ಪೆ, ಆ.15: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕರಾವಳಿ ಕಾವಲು ಪೊಲೀಸ್ ವತಿಯಿಂದ ಸೋಮವಾರ ಮಲ್ಪೆ ಸೀವಾಕ್ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕರಾವಳಿ ಕಾವಲು ಪೊಲೀಸ್ ಎಸ್ಪಿ ಅಬ್ದುಲ್ ಅಹದ್ ಹಾಗೂ ಡಿವೈಎಸ್ಪಿ ಟಿ.ಎಸ್.ಸುಲ್ಫಿ ನೇತೃತ್ವದಲ್ಲಿ ಮಲ್ಪೆ ಸಿಎಸ್‌ಪಿ ಠಾಣಾ ಎಸ್ಸೈಗಳಾದ ಎಸ್.ಕೆ. ಶಂಕರ್ ಹಾಗೂ ಪುಷ್ಪ, ಠಾಣಾ ಸಿಬ್ಬಂದಿ, ಇಲಾಖಾ ಬೋಟಿನ ತಾಂತ್ರಿಕ ಸಿಬ್ಬಂದಿ, ಕರಾವಳಿ ನಿಯಂತ್ರಣ ದಳದ ಸದಸ್ಯರು ಈ ಸ್ಪಚ್ಛತಾ ಕಾರ್ಯಕ್ರಮ ದಲ್ಲಿ ಭಾಗಿಯಾಗಿದರು.

ಸ್ಪಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಎಸ್ಪಿ ಅಬ್ದುಲ್ ಅಹದ್, ಸಮುದ್ರ ತೀರಾ ಹಾಗೂ ಬೀಚ್‌ಗಳನ್ನು ಸ್ವಚ್ಛವಾಗಿಡಲು ಸಹಕರಿಸುವಂತೆ ಸಾರ್ವಜನಿಕ ರಲ್ಲಿ ಮನವಿ ಮಾಡಿದರು. ಕಸವನ್ನು ಆಯ್ದು ತಂದ ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳನ್ನು ನಿಗದಿಪಡಿಸಿದ ಜಾಗದಲ್ಲಿ ಇಟ್ಟಿರುವ ಬುಟ್ಟಿಗಳಲ್ಲಿ ಹಾಕಲು ಅವರು ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News