ಉಪ್ಪಿನಂಗಡಿ: ಉದ್ಯಮಿಯಿಂದ ರಸ್ತೆ ಹೊಂಡ-ಗುಂಡಿ ಮುಚ್ಚುವ ಕಾರ್ಯ

Update: 2022-08-15 18:12 GMT

ಉಪ್ಪಿನಂಗಡಿ: ಹೊಂಡ- ಗುಂಡಿಗಳಿಂದಾಗಿ ವಾಹನ ಸಂಚಾರಕ್ಕೆ ಕಷ್ಟಕರವಾಗಿದ್ದ ರಸ್ತೆಯೊಂದನ್ನು ಉದ್ಯಮಿಯೋರ್ವರು ತನ್ನ ಸ್ವಂತ ಖರ್ಚಿನಲ್ಲಿ ಹೊಂಡ- ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಆಚರಿಸಿದರು.

ಇಲ್ಲಿನ ಪೆರಿಯಡ್ಕ- ಪಂಚೇರು ರಸ್ತೆ ಅಲ್ಲಲ್ಲಿ ಹೊಂಡ-ಗುಂಡಿಗಳು ಬಿದ್ದು ತೀರಾ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಉದ್ಯಮಿ ಪ್ರತಾಪ್ ಪೆರಿಯಡ್ಕರವರು ರಸ್ತೆಗೆ ಕೆಂಪು ಕಲ್ಲಿನ ಹುಡಿಯನ್ನು ತಂದು ಹೊಂಡ- ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಮಾಡಿದರು. ಇವರ ಈ ಸೇವೆಗೆ ಗ್ರಾ.ಪಂ. ಮಾಜಿ ಸದಸ್ಯ ರಮೇಶ್ ಬಂಡಾರಿ, ಸೀತಾರಾಮ ಪಂಚೇರು, ಪ್ರವೀಣ್ ನೆಡ್ಚಿಲು, ಜಗದೀಶ ಕಂಪ ಶ್ರಮದಾನ ಮೂಲಕ ಕೈಜೋಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News